<p><strong>ಕಾಗವಾಡ</strong>: ಚುನಾವಣೆಗಿಂತ ಮುಂಚಿತವಾಗಿ ನಾನು ಕಾಗವಾಡ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದೆ. ಅದಕ್ಕೆ ತಕ್ಕಷ್ಟು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಶಾಸಕ ಶ್ರೀಮಂತ ಪಾಟೀಲ ಹೇಳಿದರು.</p>.<p>ತಾಲ್ಲೂಕಿನ ಮಂಗಸೂಳಿ ಗ್ರಾಮದ ಮಲ್ಲಯ್ಯ ದೇವಸ್ಥಾನದ ಆವರಣದಲ್ಲಿ ನೀರಾವರಿ ನಿಗಮದ ವತಿಯಿಂದ ಕೈಗೆತ್ತಿಕೊಂಡ ₹ 4.50 ಕೋಟಿ ವೆಚ್ಚದ ಸಮುದಾಯ ಭವನ ಹಾಗೂ ಮೂಲ ಸೌಲಭ್ಯಗಳ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.</p>.<p>ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿ ಮಂಗಸೂಳಿ ಮಲ್ಲಯ್ಯ ದೇವಸ್ಥಾನವು ಅತ್ಯಂತ ಪ್ರಸಿದ್ಧಿ ಪಡೆದುಕೊಂಡಿದೆ. ದೇವರ ದರ್ಶನಕ್ಕೆ ದಿನವೂ ಸಾವಿರಾರು ಭಕ್ತರು ಬರುತ್ತಾರೆ. ಭಕ್ತರಿಗೆ ಮೂಲ ಸೌಲಭ್ಯಗಳನ್ನು ಒದಗಿಸುವ ದೃಷ್ಟಿಯಿಂದ ಅನುದಾನ ನೀಡಲಾಗಿದೆ. ಈ ಭಾಗದಲ್ಲಿಯೇ ಮಾದರಿ ವ್ಯವಸ್ಥೆಯುಳ್ಳ ದೇವಸ್ಥಾನವಾಗಿ ಮಾರ್ಪಾಡು ಮಾಡಲಾಗುವುದು ಎಂದರು.</p>.<p>ದೇವಾಲಯದ ಮುಂದಿರುವ ಕೆರೆಯಲ್ಲಿ 12 ತಿಂಗಳೂ ನೀರು ಇರುವಂತೆ ಮಾಡಿ, ಭಕ್ತರ ವಿಹಾರಕ್ಕಾಗಿ ಎರಡು ಬೋಟ್ಗಳನ್ನು ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ನೀಡಲಾಗಿದೆ ಎಂದರು.</p>.<p>ಮಂಗಸೂಳಿ ಗ್ರಾಮದಲ್ಲಿ ಕೂಡ ಒಂದು ಪದವಿ ಮಹಾವಿದ್ಯಾಲಯ, ಪಾಲಿಟೆಕ್ನಿಕ್ ಮಹಾವಿದ್ಯಾಲಯ ಜೊತೆಗೆ ಅಗ್ನಿಶಾಮಕ ಕೇಂದ್ರವನ್ನು ಮಂಜೂರು ಮಾಡಲಾಗಿದೆ ಎಂದು ಹೇಳಿದರು.</p>.<p>ಗ್ರಾಮದ ಮುಖಂಡರಾದ ಅಶೋಕ ಪೊಲೀಸ್ ಪಾಟೀಲ ಮಾತನಾಡಿದರು.</p>.<p>ವಿಕ್ರಂಸಿಂಹ ಪವಾರ ದೇಸಾಯಿ, ಉಜ್ವಲಸಿಂಹ ಪವಾರ ದೇಸಾಯಿ, ಮಯೂರಸಿಂಹ ಪವಾರ ದೇಸಾಯಿ, ಸಂದೀಪ ಪಾಟೀಲ, ಸಂಭಾಜಿ ಪಾಟೀಲ, ದಾದಾ ಪಾಟೀಲ, ಪ್ರವೀಣ ಹುಣಶಿಕಟ್ಟಿ, ರಾಜೇಶ ಹೆಬ್ಬಾಳ, ಸುಧಾಕರ ಭಗತ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕಾಗವಾಡ</strong>: ಚುನಾವಣೆಗಿಂತ ಮುಂಚಿತವಾಗಿ ನಾನು ಕಾಗವಾಡ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿ ಮಾಡುತ್ತೇನೆ ಎಂದು ಮಾತು ಕೊಟ್ಟಿದ್ದೆ. ಅದಕ್ಕೆ ತಕ್ಕಷ್ಟು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಶಾಸಕ ಶ್ರೀಮಂತ ಪಾಟೀಲ ಹೇಳಿದರು.</p>.<p>ತಾಲ್ಲೂಕಿನ ಮಂಗಸೂಳಿ ಗ್ರಾಮದ ಮಲ್ಲಯ್ಯ ದೇವಸ್ಥಾನದ ಆವರಣದಲ್ಲಿ ನೀರಾವರಿ ನಿಗಮದ ವತಿಯಿಂದ ಕೈಗೆತ್ತಿಕೊಂಡ ₹ 4.50 ಕೋಟಿ ವೆಚ್ಚದ ಸಮುದಾಯ ಭವನ ಹಾಗೂ ಮೂಲ ಸೌಲಭ್ಯಗಳ ನಿರ್ಮಾಣ ಕಾಮಗಾರಿಗೆ ಶುಕ್ರವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.</p>.<p>ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದಲ್ಲಿ ಮಂಗಸೂಳಿ ಮಲ್ಲಯ್ಯ ದೇವಸ್ಥಾನವು ಅತ್ಯಂತ ಪ್ರಸಿದ್ಧಿ ಪಡೆದುಕೊಂಡಿದೆ. ದೇವರ ದರ್ಶನಕ್ಕೆ ದಿನವೂ ಸಾವಿರಾರು ಭಕ್ತರು ಬರುತ್ತಾರೆ. ಭಕ್ತರಿಗೆ ಮೂಲ ಸೌಲಭ್ಯಗಳನ್ನು ಒದಗಿಸುವ ದೃಷ್ಟಿಯಿಂದ ಅನುದಾನ ನೀಡಲಾಗಿದೆ. ಈ ಭಾಗದಲ್ಲಿಯೇ ಮಾದರಿ ವ್ಯವಸ್ಥೆಯುಳ್ಳ ದೇವಸ್ಥಾನವಾಗಿ ಮಾರ್ಪಾಡು ಮಾಡಲಾಗುವುದು ಎಂದರು.</p>.<p>ದೇವಾಲಯದ ಮುಂದಿರುವ ಕೆರೆಯಲ್ಲಿ 12 ತಿಂಗಳೂ ನೀರು ಇರುವಂತೆ ಮಾಡಿ, ಭಕ್ತರ ವಿಹಾರಕ್ಕಾಗಿ ಎರಡು ಬೋಟ್ಗಳನ್ನು ಶ್ರೀಮಂತ ಪಾಟೀಲ ಫೌಂಡೇಶನ್ ವತಿಯಿಂದ ನೀಡಲಾಗಿದೆ ಎಂದರು.</p>.<p>ಮಂಗಸೂಳಿ ಗ್ರಾಮದಲ್ಲಿ ಕೂಡ ಒಂದು ಪದವಿ ಮಹಾವಿದ್ಯಾಲಯ, ಪಾಲಿಟೆಕ್ನಿಕ್ ಮಹಾವಿದ್ಯಾಲಯ ಜೊತೆಗೆ ಅಗ್ನಿಶಾಮಕ ಕೇಂದ್ರವನ್ನು ಮಂಜೂರು ಮಾಡಲಾಗಿದೆ ಎಂದು ಹೇಳಿದರು.</p>.<p>ಗ್ರಾಮದ ಮುಖಂಡರಾದ ಅಶೋಕ ಪೊಲೀಸ್ ಪಾಟೀಲ ಮಾತನಾಡಿದರು.</p>.<p>ವಿಕ್ರಂಸಿಂಹ ಪವಾರ ದೇಸಾಯಿ, ಉಜ್ವಲಸಿಂಹ ಪವಾರ ದೇಸಾಯಿ, ಮಯೂರಸಿಂಹ ಪವಾರ ದೇಸಾಯಿ, ಸಂದೀಪ ಪಾಟೀಲ, ಸಂಭಾಜಿ ಪಾಟೀಲ, ದಾದಾ ಪಾಟೀಲ, ಪ್ರವೀಣ ಹುಣಶಿಕಟ್ಟಿ, ರಾಜೇಶ ಹೆಬ್ಬಾಳ, ಸುಧಾಕರ ಭಗತ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>