ಬೆಳಗಾವಿಯ ನಂದಗಡದಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಹಾಗೂ ಆತನ 6 ಜನ ಸಹಚರರನ್ನು ಗಲ್ಲಿಗೇರಿಸಿದ ಮರವಿದು. ಬ್ರಿಟಿಷ್ ಸರ್ಕಾರ 1831ರ ಜನವರಿ 26 ರಂದು ಸಂಗೊಳ್ಳಿ ರಾಯಣ್ಣ ಸೇರಿ ಏಳು ಜನರನ್ನು ಇದೇ ಮರಕ್ಕೆ ಏಕಕಾಲಕ್ಕೆ ಬಹಿರಂಗವಾಗಿ ಗಲ್ಲಿಗೇರಿಸಿತು. ಇಲ್ಲಿಗೆ 193 ವರ್ಷಗಳು ಕಳೆದರೂ ಮರವು ಗಟ್ಟಿಯಾಗಿ ನಿಂತಿದೆ.