ಗೋಕಾಕದಲ್ಲಿ ಪತ್ರಕರ್ತರೊಂದಿಗೆ ಸೋಮವಾರ ಮಾತನಾಡಿದ ಅವರು, ‘ಒಂದೂವರೆ ವರ್ಷದ ಹಿಂದೆ ನಾನು ಹಾಗೂ ಗ್ರಾ.ಪಂ. ಸದಸ್ಯರು ಆಗ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ರಮೇಶ ಜಾರಕಿಹೊಳಿ ಅವರನ್ನು ಭೇಟಿಯಾಗಿದ್ದೆವು. 100 ವರ್ಷದ ನಂತರ ಲಕ್ಷ್ಮಿದೇವಿ ಜಾತ್ರೆ ನಡೆಯುತ್ತಿದ್ದು, ಅಭಿವೃದ್ಧಿಗೆ ಕ್ರಮ ವಹಿಸುವಂತೆ ಕೋರಿದ್ದೆವು. ನಂತರ ಸಂತೋಷ್ ಪಾಟೀಲಗೆ ಗ್ರಾ.ಪಂ.ಯಿಂದ ಪತ್ರ ನೀಡಿದ್ದೆ’ ಎಂದರು.