ನಗರದಲ್ಲಿ ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ಚುನಾವಣಾ ಸಮಯಕ್ಕೂ ಮೊದಲೇ ಆ ಕ್ಷೇತ್ರದಲ್ಲಿ ನಾವು ಸಕ್ರಿಯರಾಗಿದ್ದೆವು. ಜನರನ್ನು ಭೇಟಿ ಮಾಡಿ, ಅವರ ಕುಂದುಕೊರತೆ ಪರಿಹರಿಸುತ್ತಿದ್ದೆವು. ಬಿಜೆಪಿಯವರು ತಮ್ಮ ತಂತ್ರಗಳನ್ನು ಬಳಸಿ, ಚುನಾವಣೆ ಎದುರಿಸಿದರು. ನಾವು ನಮ್ಮ ತಂತ್ರ ಬಳಸಿ, ಯಶಸ್ವಿಯಾಗಿದ್ದೇವೆ. ಸುಲಭವಾಗಿ ಗೆಲ್ಲುವಷ್ಟು ಕ್ಷೇತ್ರ ಅದಾಗಿರಲಿಲ್ಲ’ ಎಂದರು.