‘ಬಾಲಕಿಯನ್ನು ಆಸ್ಪತ್ರೆಯ ತುರ್ತು ನಿಗಾ ಘಟಕಕ್ಕೆ ರವಾನಿಸಲಾಗಿತ್ತು. ಪ್ಲಾಸ್ಟಿಕ್ ಸರ್ಜನ್ ಡಾ.ವಿಜ್ಜಲ ಮಾಲಮಂಡೆ ಪ್ರಥಮ ಚಿಕಿತ್ಸೆ ನೀಡಿ, ಸಂಪೂರ್ಣ ತಪಾಸಣೆ ಮಾಡಿದ್ದರು. ಬಳಿಕ ತುಂಡಾದ ಕೈ ಮರುಜೋಡಣೆಗೆ ನಿರ್ಧರಿಸಿದೆವು. ನನ್ನೊಂದಿಗೆ, ಡಾ.ಶುಭಾ ದೇಸಾಯಿ, ಡಾ.ಎ. ಹಂಪಣ್ಣವರ, ಡಾ.ಶ್ರೀಧರ ಕಟದಳ ಹಾಗೂ ಶ್ರೀಧರ ಕಲಕೇರಿ ಮತ್ತು ಸಿಬ್ಬಂದಿ ಈ ಯಶಸ್ವಿ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದಾರೆ’ ಎಂದು ತಿಳಿಸಿದರು.