<p><strong>ಅಥಣಿ:</strong> ‘ಪುಣ್ಯ ಪುರುಷರ ಭವ್ಯ ಪರಂಪರೆ, ಅವರ ಬದುಕಿನ ದಾರಿ ವಿದ್ಯಾರ್ಥಿಗಳ ಜೀವನಕ್ಕೆ ಮಾರ್ಗದರ್ಶನ ಪಥವಾಗಬೇಕು’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಾಳಾಸಾಬ ಲೋಕಾಪೂರ ಹೇಳಿದರು.</p>.<p>ಲಿಂಗರಾಜ ಜಯಂತ್ಯುತ್ಸವ ಸಮಿತಿ, ಕೆಎಲ್ಇ ಅಂಗ ಸಂಸ್ಥೆಗಳ ವತಿಯಿಂದ ಇಲ್ಲಿನ ಶಿವಯೋಗಿ ಮುರುಘೇಂದ್ರ ಸ್ವಾಮೀಜಿ ಕಾಲೇಜಿನಲ್ಲಿ ಶುಕ್ರವಾರ ನಡೆದ ತ್ಯಾಗವೀರ ಶಿರಸಂಗಿ ಲಿಂಗರಾಜರ 159ನೇ ಜಯಂತ್ಯುತ್ಸವದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.</p>.<p>‘ದೇಸಾಯಿಗಳ ವಾಡೆಯಲ್ಲಿಯ ಕ್ರೌರ್ಯ, ದಬ್ಬಾಳಿಕೆಯ ಸಂಸ್ಕೃತಿಯನ್ನು ಹತ್ತಿಕ್ಕಿ ಅವು ಜನಮುಖಿ, ಸಮಾಜಮುಖಿ ಹಾಗೂ ಮಹಿಳಾಮುಖಿಯಾಗಲು ಪರಿವರ್ತನೆ ಮಾಡುವಲ್ಲಿ ಶಿರಸಂಗಿ ಲಿಂಗರಾಜರ ಪರಿಶ್ರಮ ದೊಡ್ಡದು’ ಎಂದರು.</p>.<p>ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಡಾ.ಮಹಾಂತೇಶ ಉಕ್ಕಲಿ ಮಾತನಾಡಿದರು.</p>.<p>ದಾನಿಗಳಾದ ಜಗದೀಶ ನೇಮಗೌಡ, ಬಸವರಾಜ ಇಟ್ನಾಳ, ಮಲ್ಲಿಕಾರ್ಜುನ ಸಂಕ ಹಾಗೂ ಎ.ಎಸ್. ಹಿರೇಮಠ ಅವರನ್ನು ಸನ್ಮಾನಿಸಲಾಯಿತು.</p>.<p>ಜಯಂತಿ ಅಂಗವಾಗಿ ಆಯೋಜಿಸಿದ್ದ ಭಾಷಣ ಹಾಗೂ ಗಾಯನ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಯಿತು. ಕಾವ್ಯ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ಶ್ರೀನಿವಾಸ ಚೌದರಿ (ಪ್ರಾಥಮಿಕ ಶಾಲೆ), ಸಾಗರ ಸಂಕ್ರಟ್ಟಿ (ಪ್ರೌಢಶಾಲೆ) ಮತ್ತು ನೀಲಾಂಬಿಕಾ ಹೊನ್ನೊಳ್ಳಿ (ಕಾಲೇಜು ವಿಭಾಗ) ಹಾಡಿದರು.</p>.<p>ಡಾ.ಮಲ್ಲಿಕಾರ್ಜುನ ಹಂಜಿ , ಎಚ್.ಆರ್. ಚಮಕೇರಿ, ಅಲ್ಲಪ್ಪಣ್ಣ ನಿಡೋಣಿ, ಪ್ರಕಾಶ ಪಾಟೀಲ, ವಿಜಯಕುಮಾರ ಬುರ್ಲಿ, ಎಂ.ಎನ್. ಚಿಂಚೋಳಿ, ಶ್ರೀಶೈಲ ಸಂಕ, ಮಲ್ಲಿಕಾರ್ಜುನ ಕನಶೆಟ್ಟಿ ಇದ್ದರು.</p>.<p>ಪ್ರಾಚಾರ್ಯ ಡಾ.ಆರ್.ಎಫ್. ಇಂಚಲ ಸ್ವಾಗತಿಸಿದರು. ಡಾ.ಕೆ.ಆರ್. ಸಿದ್ದಗಂಗಮ್ಮ ಪರಿಚಯಿಸಿದರು. ಡಾ.ವಿಜಯ ಕಾಂಬಳೆ ನಿರೂಪಿಸಿದರು. ಡಾ.ಎಸ್.ವೈ. ಹೊನ್ನುಂಗುರ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಥಣಿ:</strong> ‘ಪುಣ್ಯ ಪುರುಷರ ಭವ್ಯ ಪರಂಪರೆ, ಅವರ ಬದುಕಿನ ದಾರಿ ವಿದ್ಯಾರ್ಥಿಗಳ ಜೀವನಕ್ಕೆ ಮಾರ್ಗದರ್ಶನ ಪಥವಾಗಬೇಕು’ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯ ಡಾ.ಬಾಳಾಸಾಬ ಲೋಕಾಪೂರ ಹೇಳಿದರು.</p>.<p>ಲಿಂಗರಾಜ ಜಯಂತ್ಯುತ್ಸವ ಸಮಿತಿ, ಕೆಎಲ್ಇ ಅಂಗ ಸಂಸ್ಥೆಗಳ ವತಿಯಿಂದ ಇಲ್ಲಿನ ಶಿವಯೋಗಿ ಮುರುಘೇಂದ್ರ ಸ್ವಾಮೀಜಿ ಕಾಲೇಜಿನಲ್ಲಿ ಶುಕ್ರವಾರ ನಡೆದ ತ್ಯಾಗವೀರ ಶಿರಸಂಗಿ ಲಿಂಗರಾಜರ 159ನೇ ಜಯಂತ್ಯುತ್ಸವದಲ್ಲಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.</p>.<p>‘ದೇಸಾಯಿಗಳ ವಾಡೆಯಲ್ಲಿಯ ಕ್ರೌರ್ಯ, ದಬ್ಬಾಳಿಕೆಯ ಸಂಸ್ಕೃತಿಯನ್ನು ಹತ್ತಿಕ್ಕಿ ಅವು ಜನಮುಖಿ, ಸಮಾಜಮುಖಿ ಹಾಗೂ ಮಹಿಳಾಮುಖಿಯಾಗಲು ಪರಿವರ್ತನೆ ಮಾಡುವಲ್ಲಿ ಶಿರಸಂಗಿ ಲಿಂಗರಾಜರ ಪರಿಶ್ರಮ ದೊಡ್ಡದು’ ಎಂದರು.</p>.<p>ಜಯಂತ್ಯುತ್ಸವ ಸಮಿತಿ ಅಧ್ಯಕ್ಷ ಡಾ.ಮಹಾಂತೇಶ ಉಕ್ಕಲಿ ಮಾತನಾಡಿದರು.</p>.<p>ದಾನಿಗಳಾದ ಜಗದೀಶ ನೇಮಗೌಡ, ಬಸವರಾಜ ಇಟ್ನಾಳ, ಮಲ್ಲಿಕಾರ್ಜುನ ಸಂಕ ಹಾಗೂ ಎ.ಎಸ್. ಹಿರೇಮಠ ಅವರನ್ನು ಸನ್ಮಾನಿಸಲಾಯಿತು.</p>.<p>ಜಯಂತಿ ಅಂಗವಾಗಿ ಆಯೋಜಿಸಿದ್ದ ಭಾಷಣ ಹಾಗೂ ಗಾಯನ ಸ್ಪರ್ಧೆ ವಿಜೇತರಿಗೆ ಬಹುಮಾನ ನೀಡಲಾಯಿತು. ಕಾವ್ಯ ಗಾಯನ ಸ್ಪರ್ಧೆಯಲ್ಲಿ ವಿಜೇತರಾದ ಶ್ರೀನಿವಾಸ ಚೌದರಿ (ಪ್ರಾಥಮಿಕ ಶಾಲೆ), ಸಾಗರ ಸಂಕ್ರಟ್ಟಿ (ಪ್ರೌಢಶಾಲೆ) ಮತ್ತು ನೀಲಾಂಬಿಕಾ ಹೊನ್ನೊಳ್ಳಿ (ಕಾಲೇಜು ವಿಭಾಗ) ಹಾಡಿದರು.</p>.<p>ಡಾ.ಮಲ್ಲಿಕಾರ್ಜುನ ಹಂಜಿ , ಎಚ್.ಆರ್. ಚಮಕೇರಿ, ಅಲ್ಲಪ್ಪಣ್ಣ ನಿಡೋಣಿ, ಪ್ರಕಾಶ ಪಾಟೀಲ, ವಿಜಯಕುಮಾರ ಬುರ್ಲಿ, ಎಂ.ಎನ್. ಚಿಂಚೋಳಿ, ಶ್ರೀಶೈಲ ಸಂಕ, ಮಲ್ಲಿಕಾರ್ಜುನ ಕನಶೆಟ್ಟಿ ಇದ್ದರು.</p>.<p>ಪ್ರಾಚಾರ್ಯ ಡಾ.ಆರ್.ಎಫ್. ಇಂಚಲ ಸ್ವಾಗತಿಸಿದರು. ಡಾ.ಕೆ.ಆರ್. ಸಿದ್ದಗಂಗಮ್ಮ ಪರಿಚಯಿಸಿದರು. ಡಾ.ವಿಜಯ ಕಾಂಬಳೆ ನಿರೂಪಿಸಿದರು. ಡಾ.ಎಸ್.ವೈ. ಹೊನ್ನುಂಗುರ ವಂದಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>