<p><strong>ಸವದತ್ತಿ:</strong> ಶತಮಾನಗಳ ಹಿಂದೆಯೇ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಲು ಶ್ರಮಿಸಿದ ಚೌಡಯ್ಯನವರ ವಚನಗಳು ಇಂದಿಗೂ ಸಾರ್ವಕಾಲಿಕ ಸತ್ಯಗಳಾಗಿವೆ. ಅವರ ಜಯಂತಿಯ ಈ ಸಂದರ್ಭವು ಸಮಾನತೆ ಮತ್ತು ಕಾಯಕ ನಿಷ್ಠೆಯ ಮನೋಭಾವವನ್ನು ಹೆಚ್ಚಿಸಲಿ ಎಂದು ಕಾಂಗ್ರೆಸ್ ಮುಖಂಡ ಅಧ್ವಥ್ ವೈದ್ಯ ಹೇಳಿದರು.</p>.<p>ಇಲ್ಲಿನ ಗುರುಭವನದಲ್ಲಿ ಜರುಗಿದ ನಿಜ ಶಿವಶರಣ ಅಂಬಿಗರ ಚೌಡಯ್ಯನವರ 906ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು. </p>.<p>12ನೇ ಶತಮಾನದ ಬಸವಣ್ಣನವರ ಅನುಭವ ಮಂಟಪದಲ್ಲಿ ಅತ್ಯಂತ ನೇರ, ನಿಷ್ಠುರ, ವೈಚಾರಿಕ ಸಾಹಿತಿಯಾಗಿದ್ದವರ ಅಂಬಿಗರ ಚೌಡಯ್ಯನವರು. ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಠ ವ್ಯಕ್ತಿತ್ವ ಇವರದಾಗಿತ್ತು. ವಚನಗಳ ಮೂಲಕವೇ ಸಮಾಜ ಸುಧಾರಣೆ ಶ್ರಮಿಸಿದ್ದರು ಎಂದರು.</p>.<p>ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವಿರೂಪಾಕ್ಷ ಮಾಮನಿ ಮಾತನಾಡಿ, ಚೌಡಯ್ಯನವರ ಜಯಂತಿಯು ಇನ್ನೂ ಹೆಚ್ಚಿನದಾಗಿ ಅದ್ದೂರಿಯಿಂದ ಜರುಗಲಿ. ಸಮಸಮಾಜಕ್ಕೆ ವಚನ ನೀಡಿದ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಂಡು ಮಕ್ಕಳಿಗೆ ಉನ್ನತ ಶಿಕ್ಷಣ ನೀಡುತ್ತ ಸಮಾಜ ಮುಂದುವರೆಯುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.</p>.<p>ಸಮಸಮಾಜ ಕಟ್ಟುವಿಕೆಯಲ್ಲಿ ಶಿವಶರಣರ ಪಾತ್ರ ಅಮೂಲಾಗ್ರವಾದದ್ದು. ತಮ್ಮ ಕಠೋರವಾದ ಮೂವತ್ತು ಪಡಿನುಡಿಗಳಿಂದ ಮೂಢ ನಂಬಿಕೆಗಳ ಅಂಧ ಆಚರಣೆಗಳಿಗೆ ಲಗಾಮು ಹಾಕಿ ಸುಭದ್ರ ಸಮಾನತೆಯ ಸಮಾಜ ನಿರ್ಮಾಣಕ್ಕೆ ಕಾರಣೀಭೂತರಾದವರು ಎಂದರು. </p>.<p>ವೇದಿಕೆಯಲ್ಲಿ ದೇವಸ್ಥಾನಕ್ಕೆ ಜಾಗೆ ನೀಡಲು ಶಾಸಕರ ಸಹೋದರ ಅಶ್ವಥ್ ವೈದ್ಯ ಅವರಿಗೆ ಸಮಾಜದಿಂದ ಮನವಿ ಸಲ್ಲಿಸಲಾಯಿತು. ಈ ಕುರಿತು ಅಶ್ವಥ್ ಅವರು ಸೂಕ್ತ ಕ್ರಮದ ಭರವಸೆ ನೀಡಿದರು. </p>.<p>ಅಜ್ಜಪ್ಪ ಸುಣಗಾರ, ಅನಿಲ ಸುಣಗಾರ, ಸುರೇಶ ಪೂಜಾರ, ಪಕ್ಕೀರಪ್ಪ ಪೂಜೇರ, ಬಸವರಾಜ ಕಪ್ಪಣ್ಣವರ, ಪಕ್ಕೀರಪ್ಪ ಸಂಗಪ್ಪನವರ, ರಾಜು ಅಂಬಿಗೇರ, ಜಿ.ಎಚ್. ಸುಣಗಾರ ಹಾಗೂ ಸಮಾಜದ ಪ್ರಮುಖರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸವದತ್ತಿ:</strong> ಶತಮಾನಗಳ ಹಿಂದೆಯೇ ಸಮಾಜದಲ್ಲಿನ ಅಂಕುಡೊಂಕುಗಳನ್ನು ತಿದ್ದಲು ಶ್ರಮಿಸಿದ ಚೌಡಯ್ಯನವರ ವಚನಗಳು ಇಂದಿಗೂ ಸಾರ್ವಕಾಲಿಕ ಸತ್ಯಗಳಾಗಿವೆ. ಅವರ ಜಯಂತಿಯ ಈ ಸಂದರ್ಭವು ಸಮಾನತೆ ಮತ್ತು ಕಾಯಕ ನಿಷ್ಠೆಯ ಮನೋಭಾವವನ್ನು ಹೆಚ್ಚಿಸಲಿ ಎಂದು ಕಾಂಗ್ರೆಸ್ ಮುಖಂಡ ಅಧ್ವಥ್ ವೈದ್ಯ ಹೇಳಿದರು.</p>.<p>ಇಲ್ಲಿನ ಗುರುಭವನದಲ್ಲಿ ಜರುಗಿದ ನಿಜ ಶಿವಶರಣ ಅಂಬಿಗರ ಚೌಡಯ್ಯನವರ 906ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದರು. </p>.<p>12ನೇ ಶತಮಾನದ ಬಸವಣ್ಣನವರ ಅನುಭವ ಮಂಟಪದಲ್ಲಿ ಅತ್ಯಂತ ನೇರ, ನಿಷ್ಠುರ, ವೈಚಾರಿಕ ಸಾಹಿತಿಯಾಗಿದ್ದವರ ಅಂಬಿಗರ ಚೌಡಯ್ಯನವರು. ಉಳಿದೆಲ್ಲ ವಚನಕಾರರಿಗಿಂತ ಭಿನ್ನ ಹಾಗೂ ವಿಶಿಷ್ಠ ವ್ಯಕ್ತಿತ್ವ ಇವರದಾಗಿತ್ತು. ವಚನಗಳ ಮೂಲಕವೇ ಸಮಾಜ ಸುಧಾರಣೆ ಶ್ರಮಿಸಿದ್ದರು ಎಂದರು.</p>.<p>ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ವಿರೂಪಾಕ್ಷ ಮಾಮನಿ ಮಾತನಾಡಿ, ಚೌಡಯ್ಯನವರ ಜಯಂತಿಯು ಇನ್ನೂ ಹೆಚ್ಚಿನದಾಗಿ ಅದ್ದೂರಿಯಿಂದ ಜರುಗಲಿ. ಸಮಸಮಾಜಕ್ಕೆ ವಚನ ನೀಡಿದ ಮಹನೀಯರ ಆದರ್ಶಗಳನ್ನು ಮೈಗೂಡಿಸಿಕೊಂಡು ಮಕ್ಕಳಿಗೆ ಉನ್ನತ ಶಿಕ್ಷಣ ನೀಡುತ್ತ ಸಮಾಜ ಮುಂದುವರೆಯುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.</p>.<p>ಸಮಸಮಾಜ ಕಟ್ಟುವಿಕೆಯಲ್ಲಿ ಶಿವಶರಣರ ಪಾತ್ರ ಅಮೂಲಾಗ್ರವಾದದ್ದು. ತಮ್ಮ ಕಠೋರವಾದ ಮೂವತ್ತು ಪಡಿನುಡಿಗಳಿಂದ ಮೂಢ ನಂಬಿಕೆಗಳ ಅಂಧ ಆಚರಣೆಗಳಿಗೆ ಲಗಾಮು ಹಾಕಿ ಸುಭದ್ರ ಸಮಾನತೆಯ ಸಮಾಜ ನಿರ್ಮಾಣಕ್ಕೆ ಕಾರಣೀಭೂತರಾದವರು ಎಂದರು. </p>.<p>ವೇದಿಕೆಯಲ್ಲಿ ದೇವಸ್ಥಾನಕ್ಕೆ ಜಾಗೆ ನೀಡಲು ಶಾಸಕರ ಸಹೋದರ ಅಶ್ವಥ್ ವೈದ್ಯ ಅವರಿಗೆ ಸಮಾಜದಿಂದ ಮನವಿ ಸಲ್ಲಿಸಲಾಯಿತು. ಈ ಕುರಿತು ಅಶ್ವಥ್ ಅವರು ಸೂಕ್ತ ಕ್ರಮದ ಭರವಸೆ ನೀಡಿದರು. </p>.<p>ಅಜ್ಜಪ್ಪ ಸುಣಗಾರ, ಅನಿಲ ಸುಣಗಾರ, ಸುರೇಶ ಪೂಜಾರ, ಪಕ್ಕೀರಪ್ಪ ಪೂಜೇರ, ಬಸವರಾಜ ಕಪ್ಪಣ್ಣವರ, ಪಕ್ಕೀರಪ್ಪ ಸಂಗಪ್ಪನವರ, ರಾಜು ಅಂಬಿಗೇರ, ಜಿ.ಎಚ್. ಸುಣಗಾರ ಹಾಗೂ ಸಮಾಜದ ಪ್ರಮುಖರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>