ಸವದತ್ತಿ: ರಜೆಗೆ ಬಂದಿದ್ದ ತಾಲ್ಲೂಕಿನ ಹಿರೂರ ಗ್ರಾಮದ ಯೋಧ ಈರಪ್ಪಾ ಬಸಪ್ಪ ಪೂಜಾರಿ ಎಂಬುವರು ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದಾರೆ.
ಸಹೋದರಿಯ ಪುತ್ರಿಯ ಮದುವೆ ಆಮಂತ್ರಣ ಪತ್ರಿಕೆ ಕೊಡಲು ಡಿ.25 ರಂದು ಸಂಜೆ ಅವರು ತೆರಳಿದ್ದರು. ತಡರಾತ್ರಿಯಾದರೂ ಮನೆಗೆ ಮರಳಿ ಬಂದಿರಲಿಲ್ಲ. ಬೆಳಗಿನ ಜಾವ ಗ್ರಾಮದ ಹೊರ ವಲಯದಲ್ಲಿ ಅವರ ಶವ ಪತ್ತೆಯಾಗಿದೆ.
ತಲೆಗೆ ಬಲವಾಗಿ ಹೊಡೆದು ಕೊಲೆ ಮಾಡಿ, ನಂತರ ಹಿರೂರ ಗ್ರಾಮದ ಹದ್ದಿನಲ್ಲಿರುವ ಜನತಾ ಪ್ಲಾಟ್ ಹತ್ತಿರದ ಪಾಳುಬಿದ್ದ ಬಾವಿಗೆ ಮೃತದೇಹ ಎಸೆದಿರುವ ಶಂಕೆ ಇದೆ ಎಂದು ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.