‘ಕೆಲವು ದಿನಗಳ ಹಿಂದೆ ಇನ್ಸ್ಪೆಕ್ಟರ್ ಒಬ್ಬರು ನಮ್ಮನ್ನು ಕರೆಸಿ, ಚರ್ಚ್ ಹೊರತುಪಡಿಸಿ ಇತರೆಡೆ ಸಾಮೂಹಿಕ ಪ್ರಾರ್ಥನೆ ಹಮ್ಮಿಕೊಳ್ಳಬೇಡಿ ಎಂದು ಕೇಳಿಕೊಂಡಿದ್ದರು. ಇದರಿಂದಾಗಿ ಕೆಲವರು ಗುಂಪುಗಳು ಆನ್ಲೈನ್ನಲ್ಲಿ ಪ್ರಾರ್ಥನೆ ನಡೆಸುತ್ತಿವೆ. ಬಳಿಕ, ನಗರ ಪೊಲೀಸ್ ಆಯುಕ್ತ ಕೆ.ತ್ಯಾಗರಾಜನ್ ಅವರು ಆತಂಕಪಡುವ ಅಗತ್ಯವಿಲ್ಲ ಎಂದು ಅಭಯ ನೀಡಿದ್ದಾರೆ. ಈಗ ತೊಂದರೆ ಇಲ್ಲ’ ಎಂದು ಪಾಸ್ಟರ್ ಥಾಮಸ್ ಪ್ರತಿಕ್ರಿಯಿಸಿದರು.