‘ರಾಜ್ಯ ಮಾರುಕಟ್ಟೆ ಒಕ್ಕೂಟದ ಮೂಲಕ ಸೊಸೈಟಿಗಳಿಗೆ ಸರಿಯಾಗಿ ರಸಗೊಬ್ಬರ ಹೋಗುತ್ತಿಲ್ಲ. ಈ ಬಗ್ಗೆ, ನನ್ನ ಜಿಲ್ಲೆಯಾದ ಹಾವೇರಿ ಬಹಳ ದೂರುಗಳಿವೆ. ಇನ್ನು ಇತರ ಜಿಲ್ಲೆಗಳಲ್ಲಿ ಕಥೆ ಏನು? ಯಾವುದೇ ಕಾರಣಕ್ಕೂ ಕೊರತೆ ಆಗದಂತೆ ನೋಡಿಕೊಳ್ಳಬೇಕು. ಮೇ 18ಕ್ಕೆ ಇಂಡೆಂಟ್ ಕೊಟ್ಟು, ಹಣ ನೀಡಿದ್ದರೂ ಪೂರೈಕೆಯಾಗಿಲ್ಲ ಎಂದರೆ ಏನರ್ಥ? ಇದನ್ನು ಒಕ್ಕೂಟದವರು ಗಂಭೀರವಾಗಿ ಪರಿಗಣಿಸಬೇಕು’ ಎಂದು ತಾಕೀತು ಮಾಡಿದರು.