<p><strong>ಚಿಕ್ಕೋಡಿ:</strong> ಪಟ್ಟಣದ ಹೊರವಲಯದಲ್ಲಿ 36 ಎಕರೆ ಜಮೀನು ಹೊಂದಿರುವ, 50 ಜನರ ಅವಿಭಕ್ತ ಕುಟುಂಬ ಈಗ ಕೃಷಿಯಲ್ಲೂ ಹಿರಿಮೆ ಸಾಧಿಸಿದೆ. ಮಾನೆ ಕುಟುಂಬದವರು ಸಮಗ್ರ ಕೃಷಿ, ಅರಣ್ಯ ಕೃಷಿ, ತೋಟಗಾರಿಕೆ, ಸಾವಯವ ಕೃಷಿ, ಆಧುನಿಕ ಕೃಷಿ ಸೇರಿದಂತೆ ಹಲವು ಪ್ರಯೋಗಗಳ ಮೂಲಕ ಮಾದರಿಯಾಗಿದ್ದಾರೆ.</p>.<p>ಅನಿಲ ಮಾನೆ, ಜ್ಯೋತಿಬಾ ಮಾನೆ, ಶ್ರೀಕಾಂತ ಮಾನೆ, ಶ್ರೀಧರ ಮಾನೆ, ಮಾರುತಿ ಮಾನೆ ಸಹೋದರರು ಜೊತೆಗೂಡಿ ಈ ಸಾಧನೆ ಮಾಡಿದ್ದಾರೆ. ಪಟ್ಟಣದ ಜೀವನಕ್ಕಿಂತ ನೆಮ್ಮದಿ ನೀಡುವ ಕೃಷಿಯೇ ಇವರಿಗೆ ಅಚ್ಚು ಮೆಚ್ಚು.</p>.<p>12 ಎಕರೆ ಕಬ್ಬು, 4 ಎಕರೆ ವೀಳ್ಯದೆಲೆ, 3 ಎಕರೆ ಟೊಮೆಟೊ, 2 ಎಕರೆ ಮೆಣಸಿನಕಾಯಿ, 2 ಎಕರೆ ತರಕಾರಿ, ಹೊಲದ ಬದುವಿನಲ್ಲಿ 100ಕ್ಕೂ ಹೆಚ್ಚು ತೆಂಗು, ಮಾವು, ಹುಣಸೆ, ಪೇರಲ ಹಾಕಲಾಗಿದೆ. ಮನೆಗೆ ಬೇಕಾಗುವ ಗೋಧಿ, ಮೆಕ್ಕೆಜೋಳ, ಶೇಂಗಾ, ಕಡಲೆ ಮುಂತಾದ ಬೆಳೆಯನ್ನೂ ಬೆಳೆಯಲಾಗುತ್ತಿದೆ. ನಾಲ್ಕು ಬಾವಿಗಳು, 4 ಕೊಳವೆಬಾವಿಗಳು ಇವೆ. ಹನಿ ನೀರಾವರಿ ಮೂಲಕವೇ ನೀರು ಕೊಡಲಾಗುತ್ತದೆ. ಹೀಗಾಗಿ ಬೇಸಿಗೆಯಲ್ಲಿ ನೀರಿನ ತೊಂದರೆ ಬರುವ ಪ್ರಮೇಯವೇ ಇವರಿಗಿಲ್ಲ.</p>.<p>ಇದೀಗ 1 ಎಕರೆ ಪ್ರದೇಶದಲ್ಲಿ ಹಾಕಿದ ಟೊಮೆಟೊ ಕೊಯ್ಲಿಗೆ ಬಂದಿದ್ದು, 30 ಟನ್ ಇಳುವರಿಯ ನಿರೀಕ್ಷೆ ಹೊಂದಲಾಗಿದೆ. ಬೀಜ, ಗೊಬ್ಬರ, ಕಳೆ ತೆಗೆಯುವುದು ಸೇರಿದಂತೆ ₹1 ಲಕ್ಷದವರೆಗೆ ಖರ್ಚು ಮಾಡಲಾಗಿದೆ. ಒಂದು ಎಕರೆಯಿಂದ ₹7.5 ಲಕ್ಷ ಆದಾಯದ ನಿರೀಕ್ಷೆ ಹೊಂದಲಾಗಿದೆ.</p>.<p>4 ಎಕರೆ ಪ್ರದೇಶದಲ್ಲಿ ಬೇರೆ ಬೇರೆ ಪ್ಲಾಟ್ನಲ್ಲಿ ಬೆಳೆದ ವೀಳ್ಯದೆಲೆಯು ಪ್ರತಿ ಎಕರೆಗೆ ₹4 ಲಕ್ಷದಂತೆ ಒಟ್ಟು ₹20 ಲಕ್ಷ ಆದಾಯ ಬಂದಿದೆ. ಪ್ರತಿ ಎಕರೆಗೆ 50 ಟನ್ ಇಳುವರಿ ಬಂದು, ಟನ್ ಕಬ್ಬಿಗೆ ₹3,000 ದರ ಸಿಕ್ಕರೂ 12 ಎಕರೆ ಪ್ರದೇಶದಲ್ಲಿ ಬೆಳದ ಕಬ್ಬಿಗೆ ₹18 ಲಕ್ಷ ಆದಾಯ ಸಿಗುವ ಸಾಧ್ಯತೆ ಇದೆ.</p>.<p>20 ಎಮ್ಮೆ, 5 ದೇಸಿ ಹಸುಗಳನ್ನು ಸಾಕಿದ್ದು, ಸಿಗುವ ಹಾಲನ್ನು ಮನೆಗೆ ಬಳಸುತ್ತಾರೆ. 2 ಹೋರಿ, 12 ಮೇಕೆಗಳು ಇವೆ. ಜಾನುವಾರುಗಳಿಂದ ದೊರೆಯುವ ಗೊಬ್ಬರವನ್ನು ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಸರದಿಯಂತೆ ಜಮೀನಿಗೆ ಹಾಕುತ್ತಿದ್ದು, ವರ್ಷದಿಂದ ವರ್ಷಕ್ಕೆ ಇಳುವರಿ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ. ಜೀವನೋಪಾಯದ ಖರ್ಚು ತೆಗೆದು ಏನಿಲ್ಲವೆಂದರೂ ₹1ಕೋಟಿ ಆದಾಯ ಕೈ ಸೇರುತ್ತದೆ ಎಂಬುದು ಕುಟುಂಬದ ಲೆಕ್ಕಾಚಾರ.</p>.<p>ಮಾನೆ ಕುಟುಂಬ ಇತ್ತೀಚಿನ ದಿನಗಳಲ್ಲಿ ಸಾವಯವ ಕೃಷಿಯೊಂದಿಗೆ ಆಧುನಿಕ ಬೇಸಾಯ ಪದ್ಧತಿಗಳನ್ನು ಅಳವಡಿಸಿಕೊಂಡಿದೆ.</p>.<div><blockquote> ಗ್ರಾಮೀಣ ಕೃಷಿ ಬದುಕೇ ನನಗೆ ನನ್ನ ಎಲ್ಲ ಸಹೋದರರಿಗೂ ಇಷ್ಟ. ಆದಾಯ ಎಷ್ಟು ಬರುತ್ತದೆ ಎಂಬುದಕ್ಕಿಂತ ಕೃಷಿಯಿಂದ ಬದುಕು ನೆಮ್ಮದಿಯಾಗಿದೆ.</blockquote><span class="attribution">–ಅನಿಲ ಮಾನೆ, ಪ್ರಗತಿಪರ ಕೃಷಿಕ</span></div>.<div><blockquote>ವಯಸ್ಸು 77 ಆದರೂ ಹೊಲದಲ್ಲಿ ಕೆಲಸ ಮಾಡುವ ಶಕ್ತಿ ಉಳಿದಿದೆ. ಇದಕ್ಕೆ ಕಾರಣ ಕೃಷಿ ಕಾಯಕ. ಮಾನಸಿಕ ಹಾಗೂ ದೈಹಿಕ ಸದೃಢತೆ ಸಿಕ್ಕಿದೆ.</blockquote><span class="attribution">–ಶ್ರೀಕಾಂತ ಮಾನೆ, ಹಿರಿಯ ಕೃಷಿಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕೋಡಿ:</strong> ಪಟ್ಟಣದ ಹೊರವಲಯದಲ್ಲಿ 36 ಎಕರೆ ಜಮೀನು ಹೊಂದಿರುವ, 50 ಜನರ ಅವಿಭಕ್ತ ಕುಟುಂಬ ಈಗ ಕೃಷಿಯಲ್ಲೂ ಹಿರಿಮೆ ಸಾಧಿಸಿದೆ. ಮಾನೆ ಕುಟುಂಬದವರು ಸಮಗ್ರ ಕೃಷಿ, ಅರಣ್ಯ ಕೃಷಿ, ತೋಟಗಾರಿಕೆ, ಸಾವಯವ ಕೃಷಿ, ಆಧುನಿಕ ಕೃಷಿ ಸೇರಿದಂತೆ ಹಲವು ಪ್ರಯೋಗಗಳ ಮೂಲಕ ಮಾದರಿಯಾಗಿದ್ದಾರೆ.</p>.<p>ಅನಿಲ ಮಾನೆ, ಜ್ಯೋತಿಬಾ ಮಾನೆ, ಶ್ರೀಕಾಂತ ಮಾನೆ, ಶ್ರೀಧರ ಮಾನೆ, ಮಾರುತಿ ಮಾನೆ ಸಹೋದರರು ಜೊತೆಗೂಡಿ ಈ ಸಾಧನೆ ಮಾಡಿದ್ದಾರೆ. ಪಟ್ಟಣದ ಜೀವನಕ್ಕಿಂತ ನೆಮ್ಮದಿ ನೀಡುವ ಕೃಷಿಯೇ ಇವರಿಗೆ ಅಚ್ಚು ಮೆಚ್ಚು.</p>.<p>12 ಎಕರೆ ಕಬ್ಬು, 4 ಎಕರೆ ವೀಳ್ಯದೆಲೆ, 3 ಎಕರೆ ಟೊಮೆಟೊ, 2 ಎಕರೆ ಮೆಣಸಿನಕಾಯಿ, 2 ಎಕರೆ ತರಕಾರಿ, ಹೊಲದ ಬದುವಿನಲ್ಲಿ 100ಕ್ಕೂ ಹೆಚ್ಚು ತೆಂಗು, ಮಾವು, ಹುಣಸೆ, ಪೇರಲ ಹಾಕಲಾಗಿದೆ. ಮನೆಗೆ ಬೇಕಾಗುವ ಗೋಧಿ, ಮೆಕ್ಕೆಜೋಳ, ಶೇಂಗಾ, ಕಡಲೆ ಮುಂತಾದ ಬೆಳೆಯನ್ನೂ ಬೆಳೆಯಲಾಗುತ್ತಿದೆ. ನಾಲ್ಕು ಬಾವಿಗಳು, 4 ಕೊಳವೆಬಾವಿಗಳು ಇವೆ. ಹನಿ ನೀರಾವರಿ ಮೂಲಕವೇ ನೀರು ಕೊಡಲಾಗುತ್ತದೆ. ಹೀಗಾಗಿ ಬೇಸಿಗೆಯಲ್ಲಿ ನೀರಿನ ತೊಂದರೆ ಬರುವ ಪ್ರಮೇಯವೇ ಇವರಿಗಿಲ್ಲ.</p>.<p>ಇದೀಗ 1 ಎಕರೆ ಪ್ರದೇಶದಲ್ಲಿ ಹಾಕಿದ ಟೊಮೆಟೊ ಕೊಯ್ಲಿಗೆ ಬಂದಿದ್ದು, 30 ಟನ್ ಇಳುವರಿಯ ನಿರೀಕ್ಷೆ ಹೊಂದಲಾಗಿದೆ. ಬೀಜ, ಗೊಬ್ಬರ, ಕಳೆ ತೆಗೆಯುವುದು ಸೇರಿದಂತೆ ₹1 ಲಕ್ಷದವರೆಗೆ ಖರ್ಚು ಮಾಡಲಾಗಿದೆ. ಒಂದು ಎಕರೆಯಿಂದ ₹7.5 ಲಕ್ಷ ಆದಾಯದ ನಿರೀಕ್ಷೆ ಹೊಂದಲಾಗಿದೆ.</p>.<p>4 ಎಕರೆ ಪ್ರದೇಶದಲ್ಲಿ ಬೇರೆ ಬೇರೆ ಪ್ಲಾಟ್ನಲ್ಲಿ ಬೆಳೆದ ವೀಳ್ಯದೆಲೆಯು ಪ್ರತಿ ಎಕರೆಗೆ ₹4 ಲಕ್ಷದಂತೆ ಒಟ್ಟು ₹20 ಲಕ್ಷ ಆದಾಯ ಬಂದಿದೆ. ಪ್ರತಿ ಎಕರೆಗೆ 50 ಟನ್ ಇಳುವರಿ ಬಂದು, ಟನ್ ಕಬ್ಬಿಗೆ ₹3,000 ದರ ಸಿಕ್ಕರೂ 12 ಎಕರೆ ಪ್ರದೇಶದಲ್ಲಿ ಬೆಳದ ಕಬ್ಬಿಗೆ ₹18 ಲಕ್ಷ ಆದಾಯ ಸಿಗುವ ಸಾಧ್ಯತೆ ಇದೆ.</p>.<p>20 ಎಮ್ಮೆ, 5 ದೇಸಿ ಹಸುಗಳನ್ನು ಸಾಕಿದ್ದು, ಸಿಗುವ ಹಾಲನ್ನು ಮನೆಗೆ ಬಳಸುತ್ತಾರೆ. 2 ಹೋರಿ, 12 ಮೇಕೆಗಳು ಇವೆ. ಜಾನುವಾರುಗಳಿಂದ ದೊರೆಯುವ ಗೊಬ್ಬರವನ್ನು ಪ್ರತಿ ವರ್ಷ ಬೇಸಿಗೆ ಕಾಲದಲ್ಲಿ ಸರದಿಯಂತೆ ಜಮೀನಿಗೆ ಹಾಕುತ್ತಿದ್ದು, ವರ್ಷದಿಂದ ವರ್ಷಕ್ಕೆ ಇಳುವರಿ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗಿದೆ. ಜೀವನೋಪಾಯದ ಖರ್ಚು ತೆಗೆದು ಏನಿಲ್ಲವೆಂದರೂ ₹1ಕೋಟಿ ಆದಾಯ ಕೈ ಸೇರುತ್ತದೆ ಎಂಬುದು ಕುಟುಂಬದ ಲೆಕ್ಕಾಚಾರ.</p>.<p>ಮಾನೆ ಕುಟುಂಬ ಇತ್ತೀಚಿನ ದಿನಗಳಲ್ಲಿ ಸಾವಯವ ಕೃಷಿಯೊಂದಿಗೆ ಆಧುನಿಕ ಬೇಸಾಯ ಪದ್ಧತಿಗಳನ್ನು ಅಳವಡಿಸಿಕೊಂಡಿದೆ.</p>.<div><blockquote> ಗ್ರಾಮೀಣ ಕೃಷಿ ಬದುಕೇ ನನಗೆ ನನ್ನ ಎಲ್ಲ ಸಹೋದರರಿಗೂ ಇಷ್ಟ. ಆದಾಯ ಎಷ್ಟು ಬರುತ್ತದೆ ಎಂಬುದಕ್ಕಿಂತ ಕೃಷಿಯಿಂದ ಬದುಕು ನೆಮ್ಮದಿಯಾಗಿದೆ.</blockquote><span class="attribution">–ಅನಿಲ ಮಾನೆ, ಪ್ರಗತಿಪರ ಕೃಷಿಕ</span></div>.<div><blockquote>ವಯಸ್ಸು 77 ಆದರೂ ಹೊಲದಲ್ಲಿ ಕೆಲಸ ಮಾಡುವ ಶಕ್ತಿ ಉಳಿದಿದೆ. ಇದಕ್ಕೆ ಕಾರಣ ಕೃಷಿ ಕಾಯಕ. ಮಾನಸಿಕ ಹಾಗೂ ದೈಹಿಕ ಸದೃಢತೆ ಸಿಕ್ಕಿದೆ.</blockquote><span class="attribution">–ಶ್ರೀಕಾಂತ ಮಾನೆ, ಹಿರಿಯ ಕೃಷಿಕ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>