ಸುದ್ದಿ ತಿಳಿದು ಆಸ್ಪತ್ರೆಯ ಮುಂದೆ ವಿದ್ಯಾರ್ಥಿಗಳು, ಪಾಲಕರು ಮತ್ತು ಸ್ಥಳೀಯರು ಸೇರಿದ್ದರು. ಸ್ಥಳಕ್ಕಾಗಮಿಸಿದ ವಾಯವ್ಯ ಸಂಸ್ಥೆಯ ಅಧಿಕಾರಿಗಳಿಗೆ ಹೆಚ್ಚಿನ ಬಸ್ ಬಿಡಲು ಆಗ್ರಹಿಸಿದರು. ’ಶಾಲಾ-ಕಾಲೇಜು ಅವಧಿಯಲ್ಲಿ ರಾಮನಗರದಿಂದ ಪಟ್ಟಣಕ್ಕೆ ಇದ್ದ ಒಂದೇ ಬಸ್ಸಿನಲ್ಲಿ ಪ್ರಯಾಣಿಸಬೇಕಾದ ಅನಿವಾರ್ಯ ಇದೆ. ತರಗತಿಗಳು ತಪ್ಪದಿರಲೆಂದು ಲೋಂಡಾ ಗ್ರಾಮದ ವಿದ್ಯಾರ್ಥಿನಿಯರು ತುಂಬಿ ತುಳುಕುತ್ತಿದ್ದ ಬಸ್ಸಿನಲ್ಲಿ ಹತ್ತಿದ್ದರು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಬೆಳಗ್ಗೆ 7 ಮತ್ತು 8 ಗಂಟೆಗೆ ರಾಮನಗರ-ಖಾನಾಪುರ ಮತ್ತು ಮಧ್ಯಾಹ್ನ 2 ಮತ್ತು 3 ಗಂಟೆಗೆ ಖಾನಾಪುರ-ರಾಮನಗರ ನಡುವೆ ಹೆಚ್ಚುವರಿ ಬಸ್ಸುಗಳನ್ನು ಓಡಿಸಬೇಕು‘ ಎಂದು ಆಗ್ರಹಿಸಿದರು.