<p><strong>ಚನ್ನಮ್ಮನ ಕಿತ್ತೂರು</strong>: ‘ಕಾರ್ಖಾನೆಗೆ ಕಬ್ಬು ಪೂರೈಸಿದ ರೈತನಿಗೆ ತೂಕದಲ್ಲಿ ಮೋಸವಾಗಿದ್ದು, ಗಮನಕ್ಕೆ ತಂದರೆ ₹1 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದ ಸಕ್ಕರೆ ಸಚಿವ ಶಿವಾನಂದ ಪಾಟೀಲ ಈಗೆ ಎಲ್ಲಿದ್ದಾರೆ’ ಎಂದು ದೇಗುಲಹಳ್ಳಿ ಹಾಗೂ ಅಂಬಡಗಟ್ಟಿ ಗುರು ಮಡಿವಾಳೇಶ್ವರ ಮಠದ ವೀರೇಶ್ವರ ಸ್ವಾಮೀಜಿ ಪ್ರಶ್ನಿಸಿದ್ದಾರೆ.</p>.<p>‘ಕಲಬುರಗಿ ಬಳಿಯಲ್ಲಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಸಿದ್ದಸಿರಿ ಸಕ್ಕರೆ ಕಾರ್ಖಾನೆಯ ತೂಕದಲ್ಲಿ ಪ್ರತಿ ವಾಹನಕ್ಕೆ ಒಂದು ಟನ್ ವ್ಯತ್ಯಾಸವಾಗಿದೆ. ಇದನ್ನು ಅಲ್ಲಿಯ ರೈತರು ಬಹಿರಂಗವಾಗಿ ಹೇಳಿದ್ದಾರೆ. ಆ ಹೇಳಿಕೆ ನೀಡಿದ ರೈತನಿಗೆ ಸಚಿವರು ₹1 ಲಕ್ಷ ಬಹುಮಾನ ನೀಡಬೇಕು ಮತ್ತು ಕಾರ್ಖಾನೆ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸ್ವಾಮೀಜಿ ಆಗ್ರಹಿಸಿದರು.</p>.<p>‘ಅಲ್ಲಿಯ ರೈತರೊಬ್ಬರು 11 ಟ್ರಿಪ್ ಕಾರ್ಖಾನೆಗೆ ಕಬ್ಬು ಪೂರೈಸಿದ್ದಾರೆ. ಬೇರೆ ಕಡೆಗೆ ತೂಕ ಮಾಡಿಕೊಂಡ ಹೋದ ವಾಹನವು ಕಾರ್ಖಾನೆಯಲ್ಲಿ ಒಂದು ಟನ್ ಕಡಿಮೆ ತೂಗಿದೆ. ಈ ರೀತಿ ವಂಚಿಸಿ, ರೈತರ ಕುತ್ತಿಗೆಯ ಮೇಲೆ ಕಾಲಿಟ್ಟರೆ ಆತ ಬದುಕುವುದಾದರೂ ಹೇಗೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಮ್ಮನ ಕಿತ್ತೂರು</strong>: ‘ಕಾರ್ಖಾನೆಗೆ ಕಬ್ಬು ಪೂರೈಸಿದ ರೈತನಿಗೆ ತೂಕದಲ್ಲಿ ಮೋಸವಾಗಿದ್ದು, ಗಮನಕ್ಕೆ ತಂದರೆ ₹1 ಲಕ್ಷ ಬಹುಮಾನ ನೀಡುವುದಾಗಿ ಘೋಷಿಸಿದ್ದ ಸಕ್ಕರೆ ಸಚಿವ ಶಿವಾನಂದ ಪಾಟೀಲ ಈಗೆ ಎಲ್ಲಿದ್ದಾರೆ’ ಎಂದು ದೇಗುಲಹಳ್ಳಿ ಹಾಗೂ ಅಂಬಡಗಟ್ಟಿ ಗುರು ಮಡಿವಾಳೇಶ್ವರ ಮಠದ ವೀರೇಶ್ವರ ಸ್ವಾಮೀಜಿ ಪ್ರಶ್ನಿಸಿದ್ದಾರೆ.</p>.<p>‘ಕಲಬುರಗಿ ಬಳಿಯಲ್ಲಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಸಿದ್ದಸಿರಿ ಸಕ್ಕರೆ ಕಾರ್ಖಾನೆಯ ತೂಕದಲ್ಲಿ ಪ್ರತಿ ವಾಹನಕ್ಕೆ ಒಂದು ಟನ್ ವ್ಯತ್ಯಾಸವಾಗಿದೆ. ಇದನ್ನು ಅಲ್ಲಿಯ ರೈತರು ಬಹಿರಂಗವಾಗಿ ಹೇಳಿದ್ದಾರೆ. ಆ ಹೇಳಿಕೆ ನೀಡಿದ ರೈತನಿಗೆ ಸಚಿವರು ₹1 ಲಕ್ಷ ಬಹುಮಾನ ನೀಡಬೇಕು ಮತ್ತು ಕಾರ್ಖಾನೆ ವಿರುದ್ಧ ಕ್ರಮಕೈಗೊಳ್ಳಬೇಕು’ ಎಂದು ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಸ್ವಾಮೀಜಿ ಆಗ್ರಹಿಸಿದರು.</p>.<p>‘ಅಲ್ಲಿಯ ರೈತರೊಬ್ಬರು 11 ಟ್ರಿಪ್ ಕಾರ್ಖಾನೆಗೆ ಕಬ್ಬು ಪೂರೈಸಿದ್ದಾರೆ. ಬೇರೆ ಕಡೆಗೆ ತೂಕ ಮಾಡಿಕೊಂಡ ಹೋದ ವಾಹನವು ಕಾರ್ಖಾನೆಯಲ್ಲಿ ಒಂದು ಟನ್ ಕಡಿಮೆ ತೂಗಿದೆ. ಈ ರೀತಿ ವಂಚಿಸಿ, ರೈತರ ಕುತ್ತಿಗೆಯ ಮೇಲೆ ಕಾಲಿಟ್ಟರೆ ಆತ ಬದುಕುವುದಾದರೂ ಹೇಗೆ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>