ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘35 ವರ್ಷಗಳ ಸತತ ಹೋರಾಟದ ಫಲಶ್ರುತಿಯಾಗಿ ಕಾಯ್ದೆ ತರಲಾಗಿದೆ. ಆ ಪ್ರಕಾರ, ರಾಜ್ಯದಲ್ಲಿ ಯಾರೂ, ಎಲ್ಲಿಯೂ, ಯಾವುದೇ ಕಾರಣಕ್ಕೂ ಯಾವುದೇ ವಯಸ್ಸಿನ ಆಕಳು (ಗೋವು), ಕರುಗಳು (ಗಂಡಿರಲಿ-ಹೆಣ್ಣಿರಲಿ), ಎತ್ತು-ಗೂಳಿ ಅಥವಾ ಗೋವಂಶದ ಹತ್ಯೆ ಮಾಡುವಂತಿಲ್ಲ’ ಎಂದರು.