<p><strong>ಬೆಳಗಾವಿ</strong>: ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ (ಗೋಹತ್ಯೆ ನಿಷೇಧ) ಕಾಯ್ದೆ ಅನುಷ್ಠಾನಕ್ಕೆ ಜಿಲ್ಲೆಯೂ ಸೇರಿದಂತೆ ರಾಜ್ಯದಾದ್ಯಂತ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕು’ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಬಸವ ಧರ್ಮ ಜ್ಞಾನ ಪೀಠದ ಅಧ್ಯಕ್ಷ ದಯಾನಂದ ಸ್ವಾಮೀಜಿ ಒತ್ತಾಯಿಸಿದರು.</p>.<p>ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘35 ವರ್ಷಗಳ ಸತತ ಹೋರಾಟದ ಫಲಶ್ರುತಿಯಾಗಿ ಕಾಯ್ದೆ ತರಲಾಗಿದೆ. ಆ ಪ್ರಕಾರ, ರಾಜ್ಯದಲ್ಲಿ ಯಾರೂ, ಎಲ್ಲಿಯೂ, ಯಾವುದೇ ಕಾರಣಕ್ಕೂ ಯಾವುದೇ ವಯಸ್ಸಿನ ಆಕಳು (ಗೋವು), ಕರುಗಳು (ಗಂಡಿರಲಿ-ಹೆಣ್ಣಿರಲಿ), ಎತ್ತು-ಗೂಳಿ ಅಥವಾ ಗೋವಂಶದ ಹತ್ಯೆ ಮಾಡುವಂತಿಲ್ಲ’ ಎಂದರು.</p>.<p>‘13 ವರ್ಷದ ಒಳಗಿನ ಎಮ್ಮೆ ಮತ್ತು ಕೋಣ ಹಾಗೂ ಕರುಗಳನ್ನೂ ಕೊಲ್ಲುವಂತಿಲ್ಲ. ಅಲ್ಲದೇ 13 ವರ್ಷ ಮೇಲಿನ ಎಮ್ಮೆ-ಕೋಣಗಳನ್ನು ಕೊಲ್ಲಲು ರಾಜ್ಯ ಸರ್ಕಾರದ ಸಕ್ಷಮ ಪ್ರಾಧಿಕಾರದ ಪರವಾನಗಿಯನ್ನು ಕಡ್ಡಾಯವಾಗಿ ಪಡೆದಿರಬೇಕು. ಹತ್ಯೆಗಾಗಿ ಜಾನುವಾರು ಮಾರುವಂತಿಲ್ಲ; ಖರೀದಿಸುವಂತಿಲ್ಲ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ರಾಜ್ಯದೊಳಗೆ ಮತ್ತು ಹೊರಗೆ ಸಾಗಿಸುವಂತಿಲ್ಲ. ಜಾನುವಾರುಗಳ ಸಂರಕ್ಷಣೆಗೆ ಅವಶ್ಯವಿರುವಲ್ಲಿ ಗೋಶಾಲೆ ಸ್ಥಾಪಿಸಬೇಕು. ಜಿಲ್ಲಾಡಳಿತಗಳು ಹಾಗೂ ಪೊಲೀಸ್ ಇಲಾಖೆಯವರು ಇದನ್ನು ಅನುಷ್ಠಾನಗೊಳಿಸಬೇಕು’ ಎಂದು ಒತ್ತಾಯಿಸಿದರು.</p>.<p>‘ಬೆಳಗಾವಿಯಿಂದ ಗೋವಾ, ಮಹಾರಾಷ್ಟ್ರ ಮೊದಲಾದ ಕಡೆಗಳಿಗೆ ಜಾನುವಾರು ಮಾರಾಟ-ಸಾಗಾಣಿಕೆ ಆಗದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು’ ಎಂದು ಕೋರಿದರು.</p>.<p>‘ಖಾನಾಪುರ ತಾಲ್ಲೂಕಿನ ಕಕ್ಕೇರಿ ಭಿಷ್ಠಾದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿ ತಡೆ ಸಂಪೂರ್ಣ ಯಶಸ್ವಿಯಾಗಿದೆ. ಹಿಂದೆ ಅದು ರಕ್ತಸಿಕ್ತ ಕಟುಕರಕೇರಿ ಎನಿಸುತ್ತಿತ್ತು. ಈಗ ಪ್ರಾಣಿಬಲಿ ಮುಕ್ತ- ರಕ್ತಮುಕ್ತ ಸುಕ್ಷೇತ್ರವಾಗಿದೆ. ಮೌಢ್ಯ ಹಾಗೂ ಅಂಧಶ್ರದ್ಧೆ ಮೂಲಕ ಪ್ರಾಣಿ ಬಲಿ ಪರಂಪರೆಗೆ ಕಡಿವಾಣ ಬಿದ್ದಿದೆ. ಇದೊಂದು ಐತಿಹಾಸಿಕ ಬದಲಾವಣೆಯಾಗಿದೆ. ಇದಕ್ಕೆ ಸಹಕರಿಸಿದ ಎಲ್ಲರೂ ಅಭಿನಂದನಾರ್ಹರು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ‘ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ (ಗೋಹತ್ಯೆ ನಿಷೇಧ) ಕಾಯ್ದೆ ಅನುಷ್ಠಾನಕ್ಕೆ ಜಿಲ್ಲೆಯೂ ಸೇರಿದಂತೆ ರಾಜ್ಯದಾದ್ಯಂತ ಕಟ್ಟುನಿಟ್ಟಾಗಿ ಕ್ರಮ ಕೈಗೊಳ್ಳಬೇಕು’ ಎಂದು ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಮತ್ತು ಬಸವ ಧರ್ಮ ಜ್ಞಾನ ಪೀಠದ ಅಧ್ಯಕ್ಷ ದಯಾನಂದ ಸ್ವಾಮೀಜಿ ಒತ್ತಾಯಿಸಿದರು.</p>.<p>ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಶನಿವಾರ ಮಾತನಾಡಿದ ಅವರು, ‘35 ವರ್ಷಗಳ ಸತತ ಹೋರಾಟದ ಫಲಶ್ರುತಿಯಾಗಿ ಕಾಯ್ದೆ ತರಲಾಗಿದೆ. ಆ ಪ್ರಕಾರ, ರಾಜ್ಯದಲ್ಲಿ ಯಾರೂ, ಎಲ್ಲಿಯೂ, ಯಾವುದೇ ಕಾರಣಕ್ಕೂ ಯಾವುದೇ ವಯಸ್ಸಿನ ಆಕಳು (ಗೋವು), ಕರುಗಳು (ಗಂಡಿರಲಿ-ಹೆಣ್ಣಿರಲಿ), ಎತ್ತು-ಗೂಳಿ ಅಥವಾ ಗೋವಂಶದ ಹತ್ಯೆ ಮಾಡುವಂತಿಲ್ಲ’ ಎಂದರು.</p>.<p>‘13 ವರ್ಷದ ಒಳಗಿನ ಎಮ್ಮೆ ಮತ್ತು ಕೋಣ ಹಾಗೂ ಕರುಗಳನ್ನೂ ಕೊಲ್ಲುವಂತಿಲ್ಲ. ಅಲ್ಲದೇ 13 ವರ್ಷ ಮೇಲಿನ ಎಮ್ಮೆ-ಕೋಣಗಳನ್ನು ಕೊಲ್ಲಲು ರಾಜ್ಯ ಸರ್ಕಾರದ ಸಕ್ಷಮ ಪ್ರಾಧಿಕಾರದ ಪರವಾನಗಿಯನ್ನು ಕಡ್ಡಾಯವಾಗಿ ಪಡೆದಿರಬೇಕು. ಹತ್ಯೆಗಾಗಿ ಜಾನುವಾರು ಮಾರುವಂತಿಲ್ಲ; ಖರೀದಿಸುವಂತಿಲ್ಲ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ರಾಜ್ಯದೊಳಗೆ ಮತ್ತು ಹೊರಗೆ ಸಾಗಿಸುವಂತಿಲ್ಲ. ಜಾನುವಾರುಗಳ ಸಂರಕ್ಷಣೆಗೆ ಅವಶ್ಯವಿರುವಲ್ಲಿ ಗೋಶಾಲೆ ಸ್ಥಾಪಿಸಬೇಕು. ಜಿಲ್ಲಾಡಳಿತಗಳು ಹಾಗೂ ಪೊಲೀಸ್ ಇಲಾಖೆಯವರು ಇದನ್ನು ಅನುಷ್ಠಾನಗೊಳಿಸಬೇಕು’ ಎಂದು ಒತ್ತಾಯಿಸಿದರು.</p>.<p>‘ಬೆಳಗಾವಿಯಿಂದ ಗೋವಾ, ಮಹಾರಾಷ್ಟ್ರ ಮೊದಲಾದ ಕಡೆಗಳಿಗೆ ಜಾನುವಾರು ಮಾರಾಟ-ಸಾಗಾಣಿಕೆ ಆಗದಂತೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು’ ಎಂದು ಕೋರಿದರು.</p>.<p>‘ಖಾನಾಪುರ ತಾಲ್ಲೂಕಿನ ಕಕ್ಕೇರಿ ಭಿಷ್ಠಾದೇವಿ ಜಾತ್ರೆಯಲ್ಲಿ ಪ್ರಾಣಿ ಬಲಿ ತಡೆ ಸಂಪೂರ್ಣ ಯಶಸ್ವಿಯಾಗಿದೆ. ಹಿಂದೆ ಅದು ರಕ್ತಸಿಕ್ತ ಕಟುಕರಕೇರಿ ಎನಿಸುತ್ತಿತ್ತು. ಈಗ ಪ್ರಾಣಿಬಲಿ ಮುಕ್ತ- ರಕ್ತಮುಕ್ತ ಸುಕ್ಷೇತ್ರವಾಗಿದೆ. ಮೌಢ್ಯ ಹಾಗೂ ಅಂಧಶ್ರದ್ಧೆ ಮೂಲಕ ಪ್ರಾಣಿ ಬಲಿ ಪರಂಪರೆಗೆ ಕಡಿವಾಣ ಬಿದ್ದಿದೆ. ಇದೊಂದು ಐತಿಹಾಸಿಕ ಬದಲಾವಣೆಯಾಗಿದೆ. ಇದಕ್ಕೆ ಸಹಕರಿಸಿದ ಎಲ್ಲರೂ ಅಭಿನಂದನಾರ್ಹರು’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>