‘ಬೆಳಗಾವಿಯಲ್ಲಿ ನಾವು ಕನ್ನಡಪರ ಕೆಲಸ ಮಾಡಿದರೆ ಅದು ಹಿಂದೂ ಧರ್ಮ ಒಡೆಯುವ ಕೆಲಸವಂತೆ. ಅದಕ್ಕೆ ಅಡ್ಮಿನ್ಗಳಿಗೆ ಬೆದರಿಕೆ ಹಾಕಲಾಗಿದೆ.ಐದು ವರ್ಷಗಳಿಂದ ತುಂಬಾ ಜನರು ನಮಗೆ ಬೆದರಿಕೆ ಹಾಕುತ್ತಲೇ ಬಂದಿದ್ದಾರೆ. ಆದರೆ, ಅದ್ಯಾವುದಕ್ಕೂ ನಾವು ಅಂಜದೆ, ಕನ್ನಡಪರ ಕೆಲಸವನ್ನು ಮತ್ತಷ್ಟು ಗಟ್ಟಿಗೊಳಿಸುತ್ತ ಬಂದಿದ್ದೇವೆ. ಯಾವುದೇ ಆಸೆ–ಆಮಿಷಗಳಿಗೆ ಒಳಗಾಗದೆ ಕನ್ನಡಪರ ಕಾರ್ಯ ಮಾಡುತ್ತಿದ್ದೇವೆ’ ಎಂದು ಅಡ್ಮಿನ್ ಕಿರಣ ಮಾಳನ್ನವರ ಪೋಸ್ಟ್ ಹಾಕಿ ತಿರುಗೇಟು ನೀಡಿದ್ದಾರೆ.