ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮರ ಬಿದ್ದು 4 ವರ್ಷದ ಬಾಲಕಿ ಸಾವು

Last Updated 15 ಜೂನ್ 2019, 15:38 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲ್ಲೂಕಿನ ಹೊಸೂರ ಗ್ರಾಮದಲ್ಲಿ ಜೋರಾಗಿ ಬೀಸಿದ ಗಾಳಿಗೆ ಮರವೊಂದು ಮುರಿದುಬಿದ್ದ ಪರಿಣಾಮ 4 ವರ್ಷದ ಬಾಲಕಿ ಶ್ರಾವಣಿ ಮಂಜುನಾಥ ಮಾಕಿ ಮೃತಪಟ್ಟಿದ್ದಾಳೆ.

ಗ್ರಾಮದ ಗ್ಯಾರೇಜ್‌ವೊಂದರ ಕೆಳಗೆ ಶ್ರಾವಣಿ ತನ್ನ ಅಜ್ಜ ಶಿವಾನಂದ ಸೋಮಪ್ಪ ಮಾಕಿ ಹಾಗೂ 2 ವರ್ಷದ ಸಹೋದರ ಸಮರ್ಥ ಜೊತೆ ನಿಂತುಕೊಂಡಿದ್ದಳು. ಆ ವೇಳೆ ಜೋರಾಗಿ ಗಾಳಿ ಬೀಸಿದ್ದರಿಂದ ಭಾರಿ ಗಾತ್ರದ ಮರವೊಂದು ಗ್ಯಾರೇಜ್‌ ಮೇಲೆ ಮುರಿದುಕೊಂಡು ಬಿದ್ದಿತು. ಇದರ ಮುರಿದ ಟೊಂಗೆಗಳು ಶ್ರಾವಣಿಯ ತಲೆಯ ಮೇಲೆ ಬಿದ್ದವು. ತೀವ್ರವಾಗಿ ಗಾಯಗೊಂಡಿದ್ದ ಶ್ರಾವಣಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗ ಮಧ್ಯೆದಲ್ಲಿಯೇ ಅಸುನೀಗಿದಳು.

ಆಶ್ಚರ್ಯಕರ ರೀತಿಯಲ್ಲಿ ಸಮರ್ಥಗೆ ಯಾವುದೇ ಗಾಯಗಳಾಗಿಲ್ಲ. ಅಜ್ಜ ಶಿವಾನಂದ ಹಾಗೂ ಗ್ಯಾರೇಜ್‌ ಮಾಲೀಕ ಆಸೀಫ್‌ ಪಿಂಜಾರ್‌ ಅವರಿಗೆ ಗಾಯಗಳಾಗಿವೆ. ಮುರಗೋಡ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT