ಗ್ರಾಮದ ಗ್ಯಾರೇಜ್ವೊಂದರ ಕೆಳಗೆ ಶ್ರಾವಣಿ ತನ್ನ ಅಜ್ಜ ಶಿವಾನಂದ ಸೋಮಪ್ಪ ಮಾಕಿ ಹಾಗೂ 2 ವರ್ಷದ ಸಹೋದರ ಸಮರ್ಥ ಜೊತೆ ನಿಂತುಕೊಂಡಿದ್ದಳು. ಆ ವೇಳೆ ಜೋರಾಗಿ ಗಾಳಿ ಬೀಸಿದ್ದರಿಂದ ಭಾರಿ ಗಾತ್ರದ ಮರವೊಂದು ಗ್ಯಾರೇಜ್ ಮೇಲೆ ಮುರಿದುಕೊಂಡು ಬಿದ್ದಿತು. ಇದರ ಮುರಿದ ಟೊಂಗೆಗಳು ಶ್ರಾವಣಿಯ ತಲೆಯ ಮೇಲೆ ಬಿದ್ದವು. ತೀವ್ರವಾಗಿ ಗಾಯಗೊಂಡಿದ್ದ ಶ್ರಾವಣಿಯನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗ ಮಧ್ಯೆದಲ್ಲಿಯೇ ಅಸುನೀಗಿದಳು.