‘ವಿಮಾನ ಟೇಕಾಫ್ ಆಗುವ ಕೆಲವೇ ನಿಮಿಷ ಮುನ್ನ, ಪ್ರಯಾಣಿಕರ ಲಗೇಜ್ಗಳ ಭಾರ ಹೆಚ್ಚಾಗಿರುವುದು ಗೊತ್ತಾಗಿದೆ. ಹಾಗಾಗಿ ಹೆಚ್ಚುವರಿ ಲಗೇಜ್ ಬಿಟ್ಟುಬರಲಾಗಿದೆ. ಮುಂಚಿತವಾಗಿ ಮಾಹಿತಿ ನೀಡಿದರೆ ಪ್ರಯಾಣಿಕರು ಆತಂಕಗೊಳ್ಳುವ ಕಾರಣ, ಈಗ ಮಾಹಿತಿ ಕೊಡಲಾಗಿದೆ. ಸೋಮವಾರ ಬೆಳಿಗ್ಗೆ ಬರಲಿರುವ ಮೊದಲ ವಿಮಾನದಲ್ಲಿ ಎಲ್ಲ ಲಗೇಜ್ಗಳನ್ನು ತರಿಸಿ, ಪ್ರಯಾಣಿಕರ ಮನೆಗೇ ತಲುಪಿಸಲಾಗುವುದು’ ಎಂದು ಸಾಂಬ್ರಾ ವಿಮಾನ ನಿಲ್ದಾಣ ನಿರ್ದೇಶಕ ಎಸ್.ತ್ಯಾಗರಾಜನ್ ‘ಪ್ರಜಾವಾಣಿ’ಗೆ ತಿಳಿಸಿದರು.