ಕಲ್ಲಿನ ನಾಗರ ಮೂರ್ತಿಗೆ ಹಾಲನ್ನು ಎರೆಯುವ ನಾವು, ನಿಜವಾದ ಹಾವು ಕಂಡೊಡನೆ ಅದನ್ನು ಕೊಲ್ಲಲು ಪ್ರಯತ್ನಿಸುತ್ತೇವೆ. ಯಾರಾದರೂ ನಮ್ಮ ಮನೆಗೆ ಹಸಿವು ಎಂದು ಬಂದಾಗ ಅವರಿಗೆ ಅನ್ನ ಹಾಕದೆ, ಉಣ್ಣದ ಲಿಂಗಕ್ಕೆ ನೈವೇದ್ಯ ಹಿಡಿಯುತ್ತೇವೆ. ಸಂತರನ್ನು, ಶರಣರನ್ನು ಕಂಡು ನಾವು ಉಪೇಕ್ಷೆ ಮಾಡಿದರೆ ಮಣ್ಣಿನ ಹೆಂಟೆಯು ಕಲ್ಲಿಗೆ ತಾಗಿದಾಗ ಯಾವ ರೀತಿಯಾಗಿ ಪುಡಿ ಪುಡಿಯಾಗುವುದೋ ಹಾಗೆಯೇ ನಮ್ಮ ಅವಸ್ಥೆಯಾಗುತ್ತದೆ ಎನ್ನುವುದು ಈ ವಚನದ ಸಾರವಾಗಿದೆ.