ಮುಖಂಡ ಪರಶುರಾಮ ಢಗೆ ಮಾತನಾಡಿ, ‘ಜಿಲ್ಲೆಯೊಂದರಲ್ಲೇ ನೇಕಾರರು ಉತ್ಪಾದಿಸಿರುವ 15 ಲಕ್ಷ ಸೀರೆಗಳು ಮಾರಾಟವಾಗದೆ ಉಳಿದಿವೆ. ಸ್ವತಃ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರೇ ಭರವಸೆ ನೀಡಿದ್ದರೂ ಸ್ಪಂದನೆ ದೊರೆತಿಲ್ಲದಿರುವುದು ವಿಷಾದನೀಯ. ಜವಳಿ ಇಲಾಖೆ ತಪ್ಪು ಮಾಹಿತಿ ನೀಡಿದ ಕಾರಣ ಸೀರೆಗಳನ್ನು ಖರೀದಿಸಲಾಗುತ್ತಿಲ್ಲ ಎನ್ನಲಾಗುತ್ತಿದೆ. ಏನೇ ಸಮಸ್ಯೆಗಳಿದ್ದರೂ ಸರ್ಕಾರ ಬಗೆಹರಿಸಿ, ನೇಕಾರರಿಗೆ ಸಹಾಯಹಸ್ತ ಚಾಚಬೇಕು’ ಎಂದು ಕೋರಿದರು.