<p><strong>ತಲ್ಲೂರ</strong>: ಗ್ರಾಮದಲ್ಲಿ ವಿಜಯದಶಮಿಯನ್ನು ಸಂಭ್ರಮದಿಂದ ಶುಕ್ರವಾರ ಆಚರಿಸಲಾಯಿತು.</p>.<p>ಹಾದಿ ಬಸವೇಶ್ವರ ದೇವಸ್ಥಾನದಲ್ಲಿ ಸಂಜೆ ವಿಜಯ ದಶಮಿ ಹಾಗೂ ಮಹಾನವಮಿ ಹಬ್ಬದ ನಿಮಿತ್ತ ಗ್ರಾಮದ ಗೌಡರ ಮನೆತನದ ಮಲ್ಲಿಕಾರ್ಜುನ ಅಣ್ಣಿಗೇರಿಗೌಡರ ನಾಲ್ಕು ದಿಕ್ಕುಗಳಿಗೂ ಬಾಣ ಬಿಟ್ಟು ‘ಬನ್ನಿ ಕಾರ್ಯಕ್ರಮ’ಕ್ಕೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು.</p>.<p>ವೇದಮೂರ್ತಿ ಬಸಯ್ಯ ಸ್ವಾಮೀಜಿ, ‘ಪೂಜೆ–ಪುನಸ್ಕಾರ ಮಾಡುವುದರಿಂದ ಸುಖ–ಶಾಂತಿ ಲಭಿಸುತ್ತದೆ. ದೇವಿ ಆರಾಧನೆಯಿಂದ ಪುಣ್ಯ ಪ್ರಾಪ್ತಿಯಾಗುತ್ತದೆ’ ಎಂದರು.</p>.<p>ಬಳಿಕ ಮಕ್ಕಳು, ಯುವಕರು, ಹಿರಿಯರು, ಮಹಿಳೆಯರು ಬನ್ನಿ ಎಲೆಯನ್ನು ವಿನಮಯ ಮಾಡಿಕೂಂಡು ಶುಭಾಶಯ ಕೋರಿದರು.</p>.<p>ಇದಕ್ಕೂ ಮುನ್ನ ದೇಸಾಯಿ ವಾಡೆಯಿಂದ ಆರತಿ, ಗ್ರಾಮದ ಯಲ್ಲಮ್ಮನ ದೇವಸ್ಥಾನದಿಂದ ಮೂರ್ತಿ, ಪಲ್ಲಕ್ಕಿ ಉತ್ಸವವನ್ನು ಪ್ರಮುಖ ಬೀದಿಗಳಲ್ಲಿ ವಾದ್ಯಮೇಳಗಳೊಂದಿಗೆ ಹಾದಿಬಸವೇಶ್ವರ ದೇವಸ್ಥಾನಕ್ಕೆ ತರಲಾಯಿತು. ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.</p>.<p>ಶ್ರೀಮಂತ ವಿಹಾನ ದೇಸಾಯಿ ಪೂಜೆ ನೆರವೇರಿಸಿದರು. ಮುಖಂಡ ವಿನಯಕುಮಾರ ದೆಸಾಯಿ, ಗ್ರಾ.ಪಂ. ಸದಸ್ಯ ಪ್ರಫುಲ್ಲಚಂದ್ರ ದೇಸಾಯಿ, ಮುಖಂಡರಾದ ಬಾಬುಗೌಡ ಅಣ್ಣಿಗೇರಿ, ಅಶೋಕ ನಾಯ್ಕರ, ಸುಬಾಷ ಭೋವಿ, ಶಿವಯೋಗಿ ಬಡಿಗೇರ, ವಿಜಯ ಉಪ್ಪಿನ ಹಾಗೂ ಗ್ರಾಮಸ್ಥರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ತಲ್ಲೂರ</strong>: ಗ್ರಾಮದಲ್ಲಿ ವಿಜಯದಶಮಿಯನ್ನು ಸಂಭ್ರಮದಿಂದ ಶುಕ್ರವಾರ ಆಚರಿಸಲಾಯಿತು.</p>.<p>ಹಾದಿ ಬಸವೇಶ್ವರ ದೇವಸ್ಥಾನದಲ್ಲಿ ಸಂಜೆ ವಿಜಯ ದಶಮಿ ಹಾಗೂ ಮಹಾನವಮಿ ಹಬ್ಬದ ನಿಮಿತ್ತ ಗ್ರಾಮದ ಗೌಡರ ಮನೆತನದ ಮಲ್ಲಿಕಾರ್ಜುನ ಅಣ್ಣಿಗೇರಿಗೌಡರ ನಾಲ್ಕು ದಿಕ್ಕುಗಳಿಗೂ ಬಾಣ ಬಿಟ್ಟು ‘ಬನ್ನಿ ಕಾರ್ಯಕ್ರಮ’ಕ್ಕೆ ವಿಶೇಷ ಪೂಜೆ ಸಲ್ಲಿಸಿ ಚಾಲನೆ ನೀಡಿದರು.</p>.<p>ವೇದಮೂರ್ತಿ ಬಸಯ್ಯ ಸ್ವಾಮೀಜಿ, ‘ಪೂಜೆ–ಪುನಸ್ಕಾರ ಮಾಡುವುದರಿಂದ ಸುಖ–ಶಾಂತಿ ಲಭಿಸುತ್ತದೆ. ದೇವಿ ಆರಾಧನೆಯಿಂದ ಪುಣ್ಯ ಪ್ರಾಪ್ತಿಯಾಗುತ್ತದೆ’ ಎಂದರು.</p>.<p>ಬಳಿಕ ಮಕ್ಕಳು, ಯುವಕರು, ಹಿರಿಯರು, ಮಹಿಳೆಯರು ಬನ್ನಿ ಎಲೆಯನ್ನು ವಿನಮಯ ಮಾಡಿಕೂಂಡು ಶುಭಾಶಯ ಕೋರಿದರು.</p>.<p>ಇದಕ್ಕೂ ಮುನ್ನ ದೇಸಾಯಿ ವಾಡೆಯಿಂದ ಆರತಿ, ಗ್ರಾಮದ ಯಲ್ಲಮ್ಮನ ದೇವಸ್ಥಾನದಿಂದ ಮೂರ್ತಿ, ಪಲ್ಲಕ್ಕಿ ಉತ್ಸವವನ್ನು ಪ್ರಮುಖ ಬೀದಿಗಳಲ್ಲಿ ವಾದ್ಯಮೇಳಗಳೊಂದಿಗೆ ಹಾದಿಬಸವೇಶ್ವರ ದೇವಸ್ಥಾನಕ್ಕೆ ತರಲಾಯಿತು. ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.</p>.<p>ಶ್ರೀಮಂತ ವಿಹಾನ ದೇಸಾಯಿ ಪೂಜೆ ನೆರವೇರಿಸಿದರು. ಮುಖಂಡ ವಿನಯಕುಮಾರ ದೆಸಾಯಿ, ಗ್ರಾ.ಪಂ. ಸದಸ್ಯ ಪ್ರಫುಲ್ಲಚಂದ್ರ ದೇಸಾಯಿ, ಮುಖಂಡರಾದ ಬಾಬುಗೌಡ ಅಣ್ಣಿಗೇರಿ, ಅಶೋಕ ನಾಯ್ಕರ, ಸುಬಾಷ ಭೋವಿ, ಶಿವಯೋಗಿ ಬಡಿಗೇರ, ವಿಜಯ ಉಪ್ಪಿನ ಹಾಗೂ ಗ್ರಾಮಸ್ಥರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>