<p><strong>ಸವದತ್ತಿ:</strong> ಶಾಸಕ ವಿಶ್ವಾಸ್ ವೈದ್ಯ ಅವರ 42ನೇ ಜನ್ಮದಿನದ ಅಂಗವಾಗಿ ನಗರದಲ್ಲಿ ಅಭಿಮಾನಿಗಳು ಆನೆ ಮೂಲಕ ಅವರಿಗೆ ಹಾರ ಹಾಕಿಸಿ ಸಂಭ್ರಮಾಚರಿಸಿದರು.</p>.<p>ರಾಘವೇಂದ್ರ ದೇವಸ್ಥಾನದಿಂದ ಆರಂಭವಾದ ಆನೆ ಸವಾರಿ ಬೆಣ್ಣಿಕಟ್ಟಿ ಓಣಿಯಿಂದ ಆನಿಆಗಸಿ, ಕಟಕೋಳ ಬ್ಯಾಂಕ್ ವೃತ್ತ ಸೇರಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಜೊತೆಗೆ ಬೃಹದಾಕಾರದ ಗೊಂಬೆಗಳು, ಲಂಬಾಣಿ ವೇಷಧಾರಿಗಳ ಗುಂಪು, ಪೂರ್ಣಕುಂಭ ಮೆರವಣಿಗೆ ಕಣ್ಮನ ಸೆಳೆದವು.</p>.<p>ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಶಾಸಕ, ‘ಉಚಿತ ನೇತ್ರ ಚಿಕಿತ್ಸೆ ಶಿಬಿರದಲ್ಲಿ 1,200ಕ್ಕೂ ಅಧಿಕ ಜನರ ತಪಾಸಣೆ ಹಾಗೂ 600ಕ್ಕೂ ಅಧಿಕ ಜನರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ನಿಮ್ಮೆಲ್ಲರ ಪ್ರೀತಿ ಈ ವಿಶ್ವಾಸನಿಗೆ ಶ್ರೀರಕ್ಷೆಯಾಗಿದೆ’ ಎಂದರು.</p>.<p>‘ಅಭಿವೃದ್ಧಿಯಲ್ಲಿ ರಾಜಿ ಮಾತೇ ಇಲ್ಲ. ನಗರ ಸೇರಿ ಪ್ರತಿ ಗ್ರಾಮಗಳಲ್ಲಿಯೂ ಕುಡಿಯುವ ನೀರು, ರಸ್ತೆ, ಸಾರಿಗೆ ವ್ಯವಸ್ಥೆ, ವಿದ್ಯುತ್ ಸೇರಿ ಮೂಲ ಸೌಕರ್ಯಗಳನ್ನು ಒದಗಿಸಿ ಕ್ಷೇತ್ರವನ್ನು ಮಾದರಿಯಾಗಿಸುತ್ತೇನೆ’ ಎಂದು ಭರವಸೆ ನೀಡಿದರು.</p>.<p>ಬಳಿಕ ಸಾಂಪ್ರದಾಯಿಕ ಉಡುಗೆ ತೊಟ್ಟು ನೃತ್ಯ ಪ್ರದರ್ಶಿಸಿ ಲಂಬಾಣಿ ಸಮುದಾಯ ಶಾಸಕರಿಗೆ ಶುಭಕೋರಿತು. ಲಂಬಾಣಿ ಹಾಡಿಗೆ ವೈದ್ಯ ಅವರ ಪತ್ನಿ ಶ್ರುತಿ, ಪುತ್ರಿ ವೇದಿಕಾ, ಪುತ್ರ ವೇದಾಂತ, ಸಹೋದರ ಅಶ್ವಥ್ ಹಾಗೂ ಅವರ ಪತ್ನಿ ಹೆಜ್ಜೆ ಹಾಕಿದರು.</p>.<p>ಅಲ್ಲಲ್ಲಿ ಬ್ಯಾರಿಕೇಡ್ ಹಾಕಿಸಿ ಪೋಲಿಸ್ ಇಲಾಖೆ ಮುನ್ನೆಚ್ಚರಿಕೆ ಕೈಗೊಂಡಿತ್ತು. ರಾತ್ರಿಯಿಂದಲೇ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.</p>.<p>ಬಸವರಾಜ ಅರಮನಿ, ಮಂಜುನಾಥ ಪಾಚಂಗಿ, ರವಿ ದೊಡಮನಿ, ಯಲ್ಲಪ್ಪ ಗೊರವನಕೊಳ್ಳ, ಮಂಜುನಾಥ ಕಾಳಪ್ಪನವರ, ನಾಗಪ್ಪ ಬಡೆಪ್ಪನವರ, ಹನಮಂತ ಹವಾಲ್ದಾರ, ಎಂ. ಮಲ್ಲಪ್ಪ, ವೆಂಕಣ್ಣ ವೈದ್ಯ, ಕಿರಣ ಕುರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸವದತ್ತಿ:</strong> ಶಾಸಕ ವಿಶ್ವಾಸ್ ವೈದ್ಯ ಅವರ 42ನೇ ಜನ್ಮದಿನದ ಅಂಗವಾಗಿ ನಗರದಲ್ಲಿ ಅಭಿಮಾನಿಗಳು ಆನೆ ಮೂಲಕ ಅವರಿಗೆ ಹಾರ ಹಾಕಿಸಿ ಸಂಭ್ರಮಾಚರಿಸಿದರು.</p>.<p>ರಾಘವೇಂದ್ರ ದೇವಸ್ಥಾನದಿಂದ ಆರಂಭವಾದ ಆನೆ ಸವಾರಿ ಬೆಣ್ಣಿಕಟ್ಟಿ ಓಣಿಯಿಂದ ಆನಿಆಗಸಿ, ಕಟಕೋಳ ಬ್ಯಾಂಕ್ ವೃತ್ತ ಸೇರಿ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿತು. ಜೊತೆಗೆ ಬೃಹದಾಕಾರದ ಗೊಂಬೆಗಳು, ಲಂಬಾಣಿ ವೇಷಧಾರಿಗಳ ಗುಂಪು, ಪೂರ್ಣಕುಂಭ ಮೆರವಣಿಗೆ ಕಣ್ಮನ ಸೆಳೆದವು.</p>.<p>ಅಭಿಮಾನಿಗಳನ್ನು ಉದ್ದೇಶಿಸಿ ಮಾತನಾಡಿದ ಶಾಸಕ, ‘ಉಚಿತ ನೇತ್ರ ಚಿಕಿತ್ಸೆ ಶಿಬಿರದಲ್ಲಿ 1,200ಕ್ಕೂ ಅಧಿಕ ಜನರ ತಪಾಸಣೆ ಹಾಗೂ 600ಕ್ಕೂ ಅಧಿಕ ಜನರು ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ. ನಿಮ್ಮೆಲ್ಲರ ಪ್ರೀತಿ ಈ ವಿಶ್ವಾಸನಿಗೆ ಶ್ರೀರಕ್ಷೆಯಾಗಿದೆ’ ಎಂದರು.</p>.<p>‘ಅಭಿವೃದ್ಧಿಯಲ್ಲಿ ರಾಜಿ ಮಾತೇ ಇಲ್ಲ. ನಗರ ಸೇರಿ ಪ್ರತಿ ಗ್ರಾಮಗಳಲ್ಲಿಯೂ ಕುಡಿಯುವ ನೀರು, ರಸ್ತೆ, ಸಾರಿಗೆ ವ್ಯವಸ್ಥೆ, ವಿದ್ಯುತ್ ಸೇರಿ ಮೂಲ ಸೌಕರ್ಯಗಳನ್ನು ಒದಗಿಸಿ ಕ್ಷೇತ್ರವನ್ನು ಮಾದರಿಯಾಗಿಸುತ್ತೇನೆ’ ಎಂದು ಭರವಸೆ ನೀಡಿದರು.</p>.<p>ಬಳಿಕ ಸಾಂಪ್ರದಾಯಿಕ ಉಡುಗೆ ತೊಟ್ಟು ನೃತ್ಯ ಪ್ರದರ್ಶಿಸಿ ಲಂಬಾಣಿ ಸಮುದಾಯ ಶಾಸಕರಿಗೆ ಶುಭಕೋರಿತು. ಲಂಬಾಣಿ ಹಾಡಿಗೆ ವೈದ್ಯ ಅವರ ಪತ್ನಿ ಶ್ರುತಿ, ಪುತ್ರಿ ವೇದಿಕಾ, ಪುತ್ರ ವೇದಾಂತ, ಸಹೋದರ ಅಶ್ವಥ್ ಹಾಗೂ ಅವರ ಪತ್ನಿ ಹೆಜ್ಜೆ ಹಾಕಿದರು.</p>.<p>ಅಲ್ಲಲ್ಲಿ ಬ್ಯಾರಿಕೇಡ್ ಹಾಕಿಸಿ ಪೋಲಿಸ್ ಇಲಾಖೆ ಮುನ್ನೆಚ್ಚರಿಕೆ ಕೈಗೊಂಡಿತ್ತು. ರಾತ್ರಿಯಿಂದಲೇ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು.</p>.<p>ಬಸವರಾಜ ಅರಮನಿ, ಮಂಜುನಾಥ ಪಾಚಂಗಿ, ರವಿ ದೊಡಮನಿ, ಯಲ್ಲಪ್ಪ ಗೊರವನಕೊಳ್ಳ, ಮಂಜುನಾಥ ಕಾಳಪ್ಪನವರ, ನಾಗಪ್ಪ ಬಡೆಪ್ಪನವರ, ಹನಮಂತ ಹವಾಲ್ದಾರ, ಎಂ. ಮಲ್ಲಪ್ಪ, ವೆಂಕಣ್ಣ ವೈದ್ಯ, ಕಿರಣ ಕುರಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>