<p><strong>ಬೆಳಗಾವಿ:</strong> ‘ಕೋವಿಡ್–19 ಲಾಕ್ಡೌನ್ ಹಿನ್ನೆಲೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದಿಂದ ನಡೆಸುತ್ತಿರುವ ಆನ್ಲೈನ್ ಪಾಠವನ್ನು ಜೂನ್ 15ರವರೆಗೆ ಮುಂದುವರಿಸಲಾಗುತ್ತದೆ’ ಎಂದು ಕುಲಪತಿ ಡಾ.ಕರಿಸಿದ್ದಪ್ಪ ತಿಳಿಸಿದ್ದಾರೆ.</p>.<p>‘ಶೇ 70ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ತರಗತಿಗಳಿಗೆ ಹಾಗೂ ಶೇ 95ರಷ್ಟು ಮಂದಿ ಸಿಐಇ (ನಿರಂತರ ಆಂತರಿಕ ಮೌಲ್ಯಮಾಪನ) ಅಂದರೆ ಆಂತರಿಕ ಪರೀಕ್ಷೆಗಳಿಗೆ ಹಾಜರಾಗಿದ್ದಾರೆ. ಆನ್ಲೈನ್ ಮೂಲಕವೇ ತಮ್ಮ ಕಾರ್ಯಯೋಜನೆ(ಅಸೈನ್ಮೆಂಟ್) ಸಲ್ಲಿಸಿರುವ ಬಗ್ಗೆ ಪ್ರಾಂಶುಪಾಲರು ದೃಢಪಡಿಸಿದ್ದಾರೆ’ ಎಂದರು.</p>.<p>‘ಲಾಕ್ಡೌನ್ಗೂ ಮುನ್ನ ಕಾಲೇಜುಗಳಲ್ಲಿ ಶೇ 20– 30ರಷ್ಟು ಪಠ್ಯಕ್ರಮ ಪೂರ್ಣಗೊಂಡಿತ್ತು. ಮೇ ಅಂತ್ಯದ ವೇಳೆಗೆ ಶೇ 70– 75ರಷ್ಟು ಪಠ್ಯಕ್ರಮ ಪೂರ್ಣಗೊಂಡಿದೆ.</p>.<p>‘ಕಲಿಕಾ ಪ್ರಕ್ರಿಯೆ ಮುಂದುವರಿಸಲು ಡಿಜಿಟಲ್ ತಂತ್ರಜ್ಞಾನದ ಮೂಲಕ ಪರ್ಯಾಯ ವೇದಿಕೆಗಳನ್ನು ಪರಿಣಾಮಕಾರಿ<br />ಯಾಗಿ ಬಳಸಲಾಗಿದೆ. ಆನ್ಲೈನ್ ತರಗತಿಗಳು ವಿದ್ಯಾರ್ಥಿಗಳನ್ನು ಸರಿಯಾಗಿ ತಲುಪಿಲ್ಲ ಎಂಬ ಆರೋಪದಲ್ಲಿ ಹುರುಳಿಲ್ಲ’ ಎಂದು ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ:</strong> ‘ಕೋವಿಡ್–19 ಲಾಕ್ಡೌನ್ ಹಿನ್ನೆಲೆಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು)ದಿಂದ ನಡೆಸುತ್ತಿರುವ ಆನ್ಲೈನ್ ಪಾಠವನ್ನು ಜೂನ್ 15ರವರೆಗೆ ಮುಂದುವರಿಸಲಾಗುತ್ತದೆ’ ಎಂದು ಕುಲಪತಿ ಡಾ.ಕರಿಸಿದ್ದಪ್ಪ ತಿಳಿಸಿದ್ದಾರೆ.</p>.<p>‘ಶೇ 70ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ತರಗತಿಗಳಿಗೆ ಹಾಗೂ ಶೇ 95ರಷ್ಟು ಮಂದಿ ಸಿಐಇ (ನಿರಂತರ ಆಂತರಿಕ ಮೌಲ್ಯಮಾಪನ) ಅಂದರೆ ಆಂತರಿಕ ಪರೀಕ್ಷೆಗಳಿಗೆ ಹಾಜರಾಗಿದ್ದಾರೆ. ಆನ್ಲೈನ್ ಮೂಲಕವೇ ತಮ್ಮ ಕಾರ್ಯಯೋಜನೆ(ಅಸೈನ್ಮೆಂಟ್) ಸಲ್ಲಿಸಿರುವ ಬಗ್ಗೆ ಪ್ರಾಂಶುಪಾಲರು ದೃಢಪಡಿಸಿದ್ದಾರೆ’ ಎಂದರು.</p>.<p>‘ಲಾಕ್ಡೌನ್ಗೂ ಮುನ್ನ ಕಾಲೇಜುಗಳಲ್ಲಿ ಶೇ 20– 30ರಷ್ಟು ಪಠ್ಯಕ್ರಮ ಪೂರ್ಣಗೊಂಡಿತ್ತು. ಮೇ ಅಂತ್ಯದ ವೇಳೆಗೆ ಶೇ 70– 75ರಷ್ಟು ಪಠ್ಯಕ್ರಮ ಪೂರ್ಣಗೊಂಡಿದೆ.</p>.<p>‘ಕಲಿಕಾ ಪ್ರಕ್ರಿಯೆ ಮುಂದುವರಿಸಲು ಡಿಜಿಟಲ್ ತಂತ್ರಜ್ಞಾನದ ಮೂಲಕ ಪರ್ಯಾಯ ವೇದಿಕೆಗಳನ್ನು ಪರಿಣಾಮಕಾರಿ<br />ಯಾಗಿ ಬಳಸಲಾಗಿದೆ. ಆನ್ಲೈನ್ ತರಗತಿಗಳು ವಿದ್ಯಾರ್ಥಿಗಳನ್ನು ಸರಿಯಾಗಿ ತಲುಪಿಲ್ಲ ಎಂಬ ಆರೋಪದಲ್ಲಿ ಹುರುಳಿಲ್ಲ’ ಎಂದು ಸ್ಪಷ್ಟಪಡಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>