<p>ತೆಲಸಂಗ: ‘ಇಲ್ಲಿ ಯಾವುದೂ ಶಾಶ್ವತವಲ್ಲ. ಅಧಿಕಾರ ಇದ್ದಾಗ ಜನ ಕೊಡುವ ಗೌರವಕ್ಕೆ ಬೀಗದೆ ಸೌಜನ್ಯದಿಂದ ಜನಸೇವೆ ಮಾಡಬೇಕು’ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ವಿಲಾಸ ಮೋರೆ ಹೇಳಿದರು.</p>.<p>ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಮಾದಿಗ ಸಮಾಜದವರಿಂದ ಮಂಗಳವಾರ ನಡೆದ ಗಣ್ಯರ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಎಲ್ಲ ಜನರೂ ನನಗೇ ನಮಸ್ಕಾರ ಮಾಡುತ್ತಿದ್ದಾರೆಂದು ದೇವರ ಮೂರ್ತಿ ಹೊತ್ತೊಯ್ಯುವ ಕತ್ತೆಗೂಮ್ಮೆ ಗರ್ವ ಬಂದಿತ್ತಂತೆ. ಅವರು ನಮಸ್ಕರಿಸಿದ್ದು ನನಗಲ್ಲ; ನಾ ಹೊತ್ತ ದೇವರ ಮೂರ್ತಿಗೆ ಎಂದು ಕತ್ತೆಗೆ ಗೊತ್ತಾಗಿದ್ದು ಜನರು ಕಲ್ಲೆಸೆದು ಓಡಿಸಿದಾಗ. ಕೆಲ ಸಮಯ ದೇವರು ಅಧಿಕಾರ ಕೊಟ್ಟಿರುತ್ತಾನೆ. ಅದನ್ನು ಉತ್ತಮ ಕೆಲಸಕ್ಕೆ ಬಳಸಿಕೊಳ್ಳಬೇಕು’ ಎಂದರು.</p>.<p>ಗ್ರಾಮ ಪಂಚಾಯ್ತಿ ಸದಸ್ಯ ರಾಮು ನಿಡೋಣಿ, ‘ಸೇಡು, ವೈರತ್ವ, ಕೇಡು ಸಣ್ಣತನವನ್ನು ತೋರಿಸುತ್ತವೆ. ಜನರು ಭಕ್ತಿಯಿಂದ ಕೈಮುಗಿಯಬೇಕು. ಆಗ ವ್ಯಕ್ತಿತ್ವಕ್ಕೆ ಶಕ್ತಿ ಬರುತ್ತದೆ. ನಾವಿಲ್ಲದಾಗಲೂ ಜನ ನಮ್ಮನ್ನು ಹೃದಯದಲ್ಲಿಟ್ಟು ಗೌರವಿಸುತ್ತಾರೆ’ ಎಂದು ತಿಳಿಸಿದರು.</p>.<p>ನಿವೃತ್ತ ಸೈನಿಕ ಮಹಾದೇವ ಬಾಣಿ, ಡಾ.ಎಸ್.ಐ. ಇಂಚಗೇರಿ, ಸಿದ್ದಲಿಂಗ ಮಾದರ, ಗಜಾನನ ಮಾದರ, ಸಿದ್ರಾಯ ಕಳಸಗೊಂಡ, ಹಾಪೀಜ್ ರಿಜ್ವಾನ ಮೀರಾಗೋಳ, ಕಾಸಪ್ಪ, ಶಂಕರ ಮೆಣಸಂಗಿ, ಹಾಜು ಮುಜಾವರ, ಸೋಮಣ್ಣ ಮಾದರ, ಸುನೀಲ, ರಾಜು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ತೆಲಸಂಗ: ‘ಇಲ್ಲಿ ಯಾವುದೂ ಶಾಶ್ವತವಲ್ಲ. ಅಧಿಕಾರ ಇದ್ದಾಗ ಜನ ಕೊಡುವ ಗೌರವಕ್ಕೆ ಬೀಗದೆ ಸೌಜನ್ಯದಿಂದ ಜನಸೇವೆ ಮಾಡಬೇಕು’ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷ ವಿಲಾಸ ಮೋರೆ ಹೇಳಿದರು.</p>.<p>ಗ್ರಾಮದ ದುರ್ಗಾದೇವಿ ದೇವಸ್ಥಾನದಲ್ಲಿ ಮಾದಿಗ ಸಮಾಜದವರಿಂದ ಮಂಗಳವಾರ ನಡೆದ ಗಣ್ಯರ ಸತ್ಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ಎಲ್ಲ ಜನರೂ ನನಗೇ ನಮಸ್ಕಾರ ಮಾಡುತ್ತಿದ್ದಾರೆಂದು ದೇವರ ಮೂರ್ತಿ ಹೊತ್ತೊಯ್ಯುವ ಕತ್ತೆಗೂಮ್ಮೆ ಗರ್ವ ಬಂದಿತ್ತಂತೆ. ಅವರು ನಮಸ್ಕರಿಸಿದ್ದು ನನಗಲ್ಲ; ನಾ ಹೊತ್ತ ದೇವರ ಮೂರ್ತಿಗೆ ಎಂದು ಕತ್ತೆಗೆ ಗೊತ್ತಾಗಿದ್ದು ಜನರು ಕಲ್ಲೆಸೆದು ಓಡಿಸಿದಾಗ. ಕೆಲ ಸಮಯ ದೇವರು ಅಧಿಕಾರ ಕೊಟ್ಟಿರುತ್ತಾನೆ. ಅದನ್ನು ಉತ್ತಮ ಕೆಲಸಕ್ಕೆ ಬಳಸಿಕೊಳ್ಳಬೇಕು’ ಎಂದರು.</p>.<p>ಗ್ರಾಮ ಪಂಚಾಯ್ತಿ ಸದಸ್ಯ ರಾಮು ನಿಡೋಣಿ, ‘ಸೇಡು, ವೈರತ್ವ, ಕೇಡು ಸಣ್ಣತನವನ್ನು ತೋರಿಸುತ್ತವೆ. ಜನರು ಭಕ್ತಿಯಿಂದ ಕೈಮುಗಿಯಬೇಕು. ಆಗ ವ್ಯಕ್ತಿತ್ವಕ್ಕೆ ಶಕ್ತಿ ಬರುತ್ತದೆ. ನಾವಿಲ್ಲದಾಗಲೂ ಜನ ನಮ್ಮನ್ನು ಹೃದಯದಲ್ಲಿಟ್ಟು ಗೌರವಿಸುತ್ತಾರೆ’ ಎಂದು ತಿಳಿಸಿದರು.</p>.<p>ನಿವೃತ್ತ ಸೈನಿಕ ಮಹಾದೇವ ಬಾಣಿ, ಡಾ.ಎಸ್.ಐ. ಇಂಚಗೇರಿ, ಸಿದ್ದಲಿಂಗ ಮಾದರ, ಗಜಾನನ ಮಾದರ, ಸಿದ್ರಾಯ ಕಳಸಗೊಂಡ, ಹಾಪೀಜ್ ರಿಜ್ವಾನ ಮೀರಾಗೋಳ, ಕಾಸಪ್ಪ, ಶಂಕರ ಮೆಣಸಂಗಿ, ಹಾಜು ಮುಜಾವರ, ಸೋಮಣ್ಣ ಮಾದರ, ಸುನೀಲ, ರಾಜು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>