‘ಗ್ರಹಣ, ಸಾಂಕ್ರಾಮಿಕ ರೋಗಗಳಿಗೆ ಹೆದರಿ ಬಾಗಿಲು ಹಾಕಿಕೊಳ್ಳುವ ದೇವಸ್ಥಾನಗಳಲ್ಲಿರುವ ದೇವರುಗಳಿಗೆ ಕೈ ಮುಗಿಯುವ ಬದಲು ಶ್ರಮಜೀವಿಗಳಿಗೆ ಕೈ ಮುಗಿಯುವುದರಲ್ಲಿ ನವ ಸಮಾಜ ಸಾರ್ಥಕತೆ ಕಾಣಬೇಕು. ದೇವರ ಭಯ, ತೀರ್ಥ, ಪ್ರಸಾದ, ಅಭೀಷೇಕ ಎಂಬ ಸನಾತನ ಭ್ರಮೆಗಳಿಂದ ಹೊರ ಬಂದು ಭಯ ಮುಕ್ತ ಸಮಾಜದ ನಿರ್ಮಾಣಕ್ಕೆ ಕೈಜೋಡಿಸಬೇಕು. ಕಲ್ಪಿತ ದೇವರುಗಳ ಜಾಗದಲ್ಲಿ ಬಸವ, ಅಂಬೇಡ್ಕರ್, ಸಾವಿತ್ರಬಾಯಿ ಫುಲೆ, ಅಕ್ಕಮಹಾದೇವಿ ಮೊದಲಾದ ಸಮಾಜ ದೇವರುಗಳನ್ನು ಪ್ರತಿಷ್ಠಾಪಿಸಬೇಕು’ ಎಂದರು.