<p><strong>ಚಿಕ್ಕೋಡಿ:</strong> ತಾಲ್ಲೂಕಿನ ಕಬ್ಬೂರು ಪಟ್ಟಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಹಸಿರು ಹೊದ್ದು ಕಂಗೊಳಿಸುತ್ತಿದೆ. ಒಂದೂವರೆ ಎಕರೆಯಲ್ಲಿರುವ ವಸತಿ ನಿಲಯ ಮೇಲ್ವಿಚಾರಕ ನಾಗೇಶ ಕಾಪಶಿ ಅವರ ಆಸಕ್ತಿಯ ಕಾರಣ ಸುಂದರ ವನವಾಗಿದೆ.</p>.<p>ಬಂಜರು ಭೂಮಿಯಾಗಿದ್ದ 1 ಎಕರೆ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಸಹಕಾರದಿಂದ ಚಿಕ್ಕು, ತೇಗ, ತೆಂಗು, ಹುಣಸೆ ಮುಂತಾದ ಮರ– ಗಿಡಗಳನ್ನು ಬೆಳೆಸಲಾಗಿದೆ. 135 ಪೇರಲ ಗಿಡಗಳು, 6 ಪಪ್ಪಾಯ, 6 ಲಿಂಬೆ, 30 ತೇಗದ ಮರ, 15 ತೆಂಗಿನ ಮರ, 8 ಹುಣಸೆ ಮರ, 20 ಚಿಕ್ಕು ಹಣ್ಣಿನ ಗಿಡಗಳನ್ನು ಬೆಳಸಲಾಗಿದೆ. ಪಕ್ಷಿಗಳು ಇಲ್ಲಿಗೆ ಲಗ್ಗೆ ಇಡುತ್ತವೆ. ಇವುಗಳ ಕಲರವ ಕೇಳುವುದೇ ಮನಸ್ಸಿಗೆ ಆನಂದ ನೀಡುತ್ತದೆ. ಪಕ್ಷಿಗಳಿಗಾಗಿ ನೀರು ಮತ್ತು ಆಹಾರ ಇರಿಸುವ ವ್ಯವಸ್ಥೆ ಮಾಡಲಾಗಿದೆ.</p>.<p>ಕೊಳವೆಬಾವಿಯಿಂದ ಪೈಪ್ಲೈನ್ ಮಾಡಲಾಗಿದೆ. ನೀರು ಸರಬರಾಕು, ಕಳೆ ತೆಗೆಯುವುದು, ಪಾತಿ ಮಾಡುವುದನ್ನೂ ವಿದ್ಯಾರ್ಥಿಗಳು ಸಂಭ್ರಮಿಸುತ್ತಿದ್ದಾರೆ.</p>.<p><strong>ಅಡುಗೆಗೆ ತರಕಾರಿ</strong>: 20 ಗುಂಟೆಯಲ್ಲಿ ವಿಶೇಷ ಉದ್ಯಾನ ನಿರ್ಮಿಸಲಾಗಿದ್ದು, ಇಲ್ಲಿ ವಿವಿಧ ಫ್ಯಾಷನ್ ಗಿಡಗಳು, ಹೂವಿನ ಗಿಡಗಳು ಮನ ಸೆಳೆಯುವಂತಿವೆ. ಬದನೆ, ಟೊಮೆಟೊ, ಮೂಲಂಗಿ, ಕೊತ್ತಂಬರಿ ಮುಂತಾದ ತರಕಾರಿಗಳನ್ನು ಬೆಳೆಯಲಾಗುತ್ತಿದೆ. ಇವುಗಳನ್ನೇ ಅಡುಗೆಗೂ ಬಳಸಲಾಗುತ್ತದೆ. ಹಣ್ಣುಗಳನ್ನೂ ವಿದ್ಯಾರ್ಥಿಗಳಿಗೇ ನೀಡುತ್ತಿವುದು ವಿಶೇಷ.</p>.<div><blockquote>ಬಂಜರು ಭೂಮಿಯಾಗಿದ್ದ ವಸತಿ ನಿಲಯದ ಆವರಣದಲ್ಲಿ ಅರಣ್ಯ ಇಲಾಖೆಯ ಸಹಕಾರದಿಂದ ವಿವಿಧ ಮರಗಿಡಗಳನ್ನು ಬೆಳೆಸಲಾಗಿದೆ. ಮನಸ್ಸಿಗೆ ಆನಂದವಾಗುತ್ತದೆ.</blockquote><span class="attribution">– ನಾಗೇಶ ಕಾಪಶಿ, ವಸತಿ ನಿಲಯ ಮೇಲ್ವಿಚಾರಕ ಕಬ್ಬೂರ</span></div>.<div><blockquote>ವಾರ್ಡನ್ ನಾಗೇಶ ಕಾಪಶಿ ಅವರು ಹಾಸ್ಟೆಲ್ಗೆ ನಯನ ಮನೋಹರ ರೂಪ ನೀಡಿದ್ದಾರೆ. ಎಲ್ಲ ಕಡೆ ಇಂಥ ಪ್ರಯತ್ನ ಮಾಡಲು ಉದ್ದೇಶಿಸಲಾಗಿದೆ.</blockquote><span class="attribution">– ಅರ್ಚನಾ ಸಾನೆ, ಗ್ರೇಡ್–1 ಸಹಾಯಕ ನಿರ್ದೇಶಕಿ ಸಮಾಜ ಕಲ್ಯಾಣ ಇಲಾಖೆ ಚಿಕ್ಕೋಡಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚಿಕ್ಕೋಡಿ:</strong> ತಾಲ್ಲೂಕಿನ ಕಬ್ಬೂರು ಪಟ್ಟಣದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಡಾ.ಬಿ.ಆರ್. ಅಂಬೇಡ್ಕರ್ ಸರ್ಕಾರಿ ಮೆಟ್ರಿಕ್ ಪೂರ್ವ ಬಾಲಕರ ವಸತಿ ನಿಲಯ ಹಸಿರು ಹೊದ್ದು ಕಂಗೊಳಿಸುತ್ತಿದೆ. ಒಂದೂವರೆ ಎಕರೆಯಲ್ಲಿರುವ ವಸತಿ ನಿಲಯ ಮೇಲ್ವಿಚಾರಕ ನಾಗೇಶ ಕಾಪಶಿ ಅವರ ಆಸಕ್ತಿಯ ಕಾರಣ ಸುಂದರ ವನವಾಗಿದೆ.</p>.<p>ಬಂಜರು ಭೂಮಿಯಾಗಿದ್ದ 1 ಎಕರೆ ಪ್ರದೇಶದಲ್ಲಿ ಅರಣ್ಯ ಇಲಾಖೆಯ ಸಹಕಾರದಿಂದ ಚಿಕ್ಕು, ತೇಗ, ತೆಂಗು, ಹುಣಸೆ ಮುಂತಾದ ಮರ– ಗಿಡಗಳನ್ನು ಬೆಳೆಸಲಾಗಿದೆ. 135 ಪೇರಲ ಗಿಡಗಳು, 6 ಪಪ್ಪಾಯ, 6 ಲಿಂಬೆ, 30 ತೇಗದ ಮರ, 15 ತೆಂಗಿನ ಮರ, 8 ಹುಣಸೆ ಮರ, 20 ಚಿಕ್ಕು ಹಣ್ಣಿನ ಗಿಡಗಳನ್ನು ಬೆಳಸಲಾಗಿದೆ. ಪಕ್ಷಿಗಳು ಇಲ್ಲಿಗೆ ಲಗ್ಗೆ ಇಡುತ್ತವೆ. ಇವುಗಳ ಕಲರವ ಕೇಳುವುದೇ ಮನಸ್ಸಿಗೆ ಆನಂದ ನೀಡುತ್ತದೆ. ಪಕ್ಷಿಗಳಿಗಾಗಿ ನೀರು ಮತ್ತು ಆಹಾರ ಇರಿಸುವ ವ್ಯವಸ್ಥೆ ಮಾಡಲಾಗಿದೆ.</p>.<p>ಕೊಳವೆಬಾವಿಯಿಂದ ಪೈಪ್ಲೈನ್ ಮಾಡಲಾಗಿದೆ. ನೀರು ಸರಬರಾಕು, ಕಳೆ ತೆಗೆಯುವುದು, ಪಾತಿ ಮಾಡುವುದನ್ನೂ ವಿದ್ಯಾರ್ಥಿಗಳು ಸಂಭ್ರಮಿಸುತ್ತಿದ್ದಾರೆ.</p>.<p><strong>ಅಡುಗೆಗೆ ತರಕಾರಿ</strong>: 20 ಗುಂಟೆಯಲ್ಲಿ ವಿಶೇಷ ಉದ್ಯಾನ ನಿರ್ಮಿಸಲಾಗಿದ್ದು, ಇಲ್ಲಿ ವಿವಿಧ ಫ್ಯಾಷನ್ ಗಿಡಗಳು, ಹೂವಿನ ಗಿಡಗಳು ಮನ ಸೆಳೆಯುವಂತಿವೆ. ಬದನೆ, ಟೊಮೆಟೊ, ಮೂಲಂಗಿ, ಕೊತ್ತಂಬರಿ ಮುಂತಾದ ತರಕಾರಿಗಳನ್ನು ಬೆಳೆಯಲಾಗುತ್ತಿದೆ. ಇವುಗಳನ್ನೇ ಅಡುಗೆಗೂ ಬಳಸಲಾಗುತ್ತದೆ. ಹಣ್ಣುಗಳನ್ನೂ ವಿದ್ಯಾರ್ಥಿಗಳಿಗೇ ನೀಡುತ್ತಿವುದು ವಿಶೇಷ.</p>.<div><blockquote>ಬಂಜರು ಭೂಮಿಯಾಗಿದ್ದ ವಸತಿ ನಿಲಯದ ಆವರಣದಲ್ಲಿ ಅರಣ್ಯ ಇಲಾಖೆಯ ಸಹಕಾರದಿಂದ ವಿವಿಧ ಮರಗಿಡಗಳನ್ನು ಬೆಳೆಸಲಾಗಿದೆ. ಮನಸ್ಸಿಗೆ ಆನಂದವಾಗುತ್ತದೆ.</blockquote><span class="attribution">– ನಾಗೇಶ ಕಾಪಶಿ, ವಸತಿ ನಿಲಯ ಮೇಲ್ವಿಚಾರಕ ಕಬ್ಬೂರ</span></div>.<div><blockquote>ವಾರ್ಡನ್ ನಾಗೇಶ ಕಾಪಶಿ ಅವರು ಹಾಸ್ಟೆಲ್ಗೆ ನಯನ ಮನೋಹರ ರೂಪ ನೀಡಿದ್ದಾರೆ. ಎಲ್ಲ ಕಡೆ ಇಂಥ ಪ್ರಯತ್ನ ಮಾಡಲು ಉದ್ದೇಶಿಸಲಾಗಿದೆ.</blockquote><span class="attribution">– ಅರ್ಚನಾ ಸಾನೆ, ಗ್ರೇಡ್–1 ಸಹಾಯಕ ನಿರ್ದೇಶಕಿ ಸಮಾಜ ಕಲ್ಯಾಣ ಇಲಾಖೆ ಚಿಕ್ಕೋಡಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>