‘ಅರವಿಂದ ಬೆಲ್ಲದ ಅವರನ್ನು ವಿರೋಧ ಪಕ್ಷದ ಉಪ ನಾಯಕರಾಗಿ ಮಾಡುತ್ತಾರಂತಲ್ಲ’ ಎಂಬ ಬಗ್ಗೆ ಪ್ರತಿಕ್ರಿಯಿಸಿದ ಅವರು, ಎಲ್ಲ ತೀರ್ಮಾನಗಳನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು, ಪ್ರತಿಪಕ್ಷ ನಾಯಕರೇ ತೆಗೆದುಕೊಳ್ಳುತ್ತಾರೆ. ಹಾಗಿರುವಾಗ ಉಪ ನಾಯಕನಿಗೆ ಏನು ಕೆಲಸ? ಉಪ ಸಭಾಧ್ಯಕ್ಷರ ಸ್ಥಾನವಿದ್ದಂತೆ. ಸಭಾಧ್ಯಕ್ಷರು ತಮ್ಮ ಜಾಗದಲ್ಲಿ ಕೂರಲು ಅವರಿಗೆ ಅವಕಾಶವನ್ನೇ ಕೊಡುವುದಿಲ್ಲ. ಮಂಗಳವಾರ ಕೇವಲ ಅರ್ಧ ಗಂಟೆ ಕೊಟ್ಟರು. ಉಪ ನಾಯಕನಿಗೂ ಸಮಾಜದಲ್ಲಿ ಗೌರವ ಏನೂ ಸಿಗುವುದಿಲ್ಲ’ ಎಂದರು.