<p><strong>ಚನ್ನಮ್ಮನ ಕಿತ್ತೂರು: </strong>18 ಅಥವಾ 19ನೇ ಶತಮಾನದ್ದು ಎನ್ನಲಾದ ಪುರಾತನ ಬದು (ಹಾಳೆ) ಸವರುವ ದೊಡ್ಡ ಆಕಾರದ ಎರಡು ಕುಡುಗೋಲುಗಳನ್ನು ಸಮೀಪದ ಡೊಂಬರಕೊಪ್ಪದ ಸಿದ್ದಲಿಂಗಪ್ಪ ಕಲ್ಲೇದ ಅವರು ಇಲ್ಲಿಯ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ.<br /> <br /> 4.5 ಕೆ.ಜಿ ತೂಕದ ಒಂದು ಕುಡಗೋಲು ಸುಮಾರು 5 ಅಡಿ ಉದ್ದವಿದೆ. ಅದರ ಹಿಡಿಕೆಯೇ 7 ಅಂಗುಲದಷ್ಟು ದೊಡ್ಡದಿದೆ. ಮತ್ತೊಂದು ಕುಡುಗೋಲು 3 ಕೆ.ಜಿಯಷ್ಟಿದ್ದು ಸುಮಾರು 3.5 ಅಡಿ ಉದ್ದವಿದೆ. ಇದರ ಹಿಡಿಕೆ 6 ಅಂಗುಲದಷ್ಟಿದೆ. ‘ಹೊಲದ ಹಾಳೆ ಸವರಲು, ಮಣ್ಣು ಸಮ ಮಾಡಲು ಹಿಂದೆ ಏನು ಉಪಕರಣ ಬಳಸುತ್ತಿದ್ದರು ಎಂಬುದಕ್ಕೆ ಈ ಬದು ಸವರುವ ಕುಡುಗೋಲು ನಿದರ್ಶನವಾಗಿದೆ’ ಎಂದು ಪುರಾತತ್ವ ಇಲಾಖೆ ಸಹಾಯಕ ಕ್ಯೂರೇಟರ್ ಎನ್. ರಾಘವೇಂದ್ರ ತಿಳಿಸಿದರು.<br /> <br /> ‘ಇವುಗಳನ್ನು ಅಂದಗೊಳಿಸಿ ಒಂದು ಫ್ರೇಮ್ ಹಾಕಿಸಿ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗುವುದು’ ಎಂದು ಅವರು ಹೇಳಿದರು. ಕಿತ್ತೂರು ಅಥವಾ ಸುತ್ತಮುತ್ತಲಿನ ಊರುಗಳಲ್ಲಿ ಇಂತಹ ವಿಶೇಷ ವಸ್ತುಗಳೇನಾದರೂ ಸಿಕ್ಕರೆ ಅಥವಾ ಮನೆಯಲ್ಲಿದ್ದರೆ ಅವುಗಳನ್ನು ವಸ್ತು ಸಂಗ್ರಹಾಲಯಕ್ಕೆ ನೀಡುವಂತೆಯೂ ಅವರು ಮನವಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಚನ್ನಮ್ಮನ ಕಿತ್ತೂರು: </strong>18 ಅಥವಾ 19ನೇ ಶತಮಾನದ್ದು ಎನ್ನಲಾದ ಪುರಾತನ ಬದು (ಹಾಳೆ) ಸವರುವ ದೊಡ್ಡ ಆಕಾರದ ಎರಡು ಕುಡುಗೋಲುಗಳನ್ನು ಸಮೀಪದ ಡೊಂಬರಕೊಪ್ಪದ ಸಿದ್ದಲಿಂಗಪ್ಪ ಕಲ್ಲೇದ ಅವರು ಇಲ್ಲಿಯ ಪ್ರಾಚ್ಯವಸ್ತು ಸಂಗ್ರಹಾಲಯಕ್ಕೆ ಕೊಡುಗೆಯಾಗಿ ನೀಡಿದ್ದಾರೆ.<br /> <br /> 4.5 ಕೆ.ಜಿ ತೂಕದ ಒಂದು ಕುಡಗೋಲು ಸುಮಾರು 5 ಅಡಿ ಉದ್ದವಿದೆ. ಅದರ ಹಿಡಿಕೆಯೇ 7 ಅಂಗುಲದಷ್ಟು ದೊಡ್ಡದಿದೆ. ಮತ್ತೊಂದು ಕುಡುಗೋಲು 3 ಕೆ.ಜಿಯಷ್ಟಿದ್ದು ಸುಮಾರು 3.5 ಅಡಿ ಉದ್ದವಿದೆ. ಇದರ ಹಿಡಿಕೆ 6 ಅಂಗುಲದಷ್ಟಿದೆ. ‘ಹೊಲದ ಹಾಳೆ ಸವರಲು, ಮಣ್ಣು ಸಮ ಮಾಡಲು ಹಿಂದೆ ಏನು ಉಪಕರಣ ಬಳಸುತ್ತಿದ್ದರು ಎಂಬುದಕ್ಕೆ ಈ ಬದು ಸವರುವ ಕುಡುಗೋಲು ನಿದರ್ಶನವಾಗಿದೆ’ ಎಂದು ಪುರಾತತ್ವ ಇಲಾಖೆ ಸಹಾಯಕ ಕ್ಯೂರೇಟರ್ ಎನ್. ರಾಘವೇಂದ್ರ ತಿಳಿಸಿದರು.<br /> <br /> ‘ಇವುಗಳನ್ನು ಅಂದಗೊಳಿಸಿ ಒಂದು ಫ್ರೇಮ್ ಹಾಕಿಸಿ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗುವುದು’ ಎಂದು ಅವರು ಹೇಳಿದರು. ಕಿತ್ತೂರು ಅಥವಾ ಸುತ್ತಮುತ್ತಲಿನ ಊರುಗಳಲ್ಲಿ ಇಂತಹ ವಿಶೇಷ ವಸ್ತುಗಳೇನಾದರೂ ಸಿಕ್ಕರೆ ಅಥವಾ ಮನೆಯಲ್ಲಿದ್ದರೆ ಅವುಗಳನ್ನು ವಸ್ತು ಸಂಗ್ರಹಾಲಯಕ್ಕೆ ನೀಡುವಂತೆಯೂ ಅವರು ಮನವಿ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>