<p><strong>ಸುವರ್ಣಸೌಧ (ಬೆಳಗಾವಿ): </strong>ಪ್ರಸಕ್ತ ಸಾಲಿನ ರೈತರ ಬೆಳೆಸಾಲ ಮನ್ನಾ ಬಾಬ್ತು ₨ 1,185 ಕೋಟಿಯನ್ನು ಸಹಕಾರ ಸಂಘಗಳು ಮತ್ತು ಬ್ಯಾಂಕು ಗಳಿಗೆ ಬಿಡುಗಡೆ ಮಾಡ ಬೇಕಿದೆ ಎಂದು ಸಹಕಾರ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ಅವರು ಮಂಗಳವಾರ ವಿಧಾನ ಪರಿಷತ್ತಿಗೆ ತಿಳಿಸಿದರು.<br /> <br /> ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಸಾಲ ಮನ್ನಾ ಯೋಜನೆಯಡಿ ಈವರೆಗೆ ₨ 2,073.77 ಕೋಟಿ ಬಿಡುಗಡೆ ಮಾಡಿದೆ. ಬಾಕಿ ಇರುವ ₨ 1,185 ಕೋಟಿಯನ್ನು 2014ರ ಮಾರ್ಚ್ ಅಂತ್ಯದೊಳಗೆ ಪೂರ್ಣ ವಾಗಿ ಪಾವತಿಸಲಾಗುವುದು ಎಂದರು.<br /> <br /> ಒಟ್ಟು 15.38 ಲಕ್ಷ ರೈತರು ಸಾಲ ಮನ್ನಾ ಯೋಜನೆಯ ಅನುಕೂಲ ಪಡೆಯುತ್ತಾರೆ. ಈಗಾಗಲೇ 9.17 ಲಕ್ಷ ರೈತರು ಈ ಯೋಜನೆಯ ಲಾಭ ಪಡೆದಿದ್ದಾರೆ. ಇನ್ನೂ 5.21 ಲಕ್ಷ ರೈತರು ಈ ಯೋಜನೆಯ ಅನುಕೂಲ ಪಡೆಯಲಿದ್ದಾರೆ ಎಂದು ಸದನಕ್ಕೆ ವಿವರ ಒದಗಿಸಿದರು.<br /> <br /> ಸಾಲಮನ್ನಾ ಯೋಜನೆಯ ಬಾಕಿ ಬಿಡುಗಡೆ ಮಾಡದ ಕಾರಣದಿಂದ ರೈತರಿಗೆ ಹೊಸ ಸಾಲ ದೊರೆಯುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಕಾಲಕಾಲಕ್ಕೆ ಸಾಲ ಮನ್ನಾ ಬಾಬ್ತು ಹಣ ಬಿಡುಗಡೆ ಮಾಡಲಾಗು ತ್ತಿದೆ. ಹಿಂದಿನ ವರ್ಷ ಈ ಅವಧಿ ಯಲ್ಲಿನ₨ 3,200 ಕೋಟಿ ಸಾಲ ಹಂಚಿಕೆ ಮಾಡಲಾಗಿತ್ತು. ಈ ವರ್ಷ ಈವರೆಗೆ ₨ 4,300 ಕೋಟಿ ಸಾಲ ವಿತರಿಸಲಾಗಿದೆ ’ ಎಂದರು.<br /> <br /> <strong>ಮತ್ತೆ ಸಾಲ ಮನ್ನಾ ಇಲ್ಲ</strong><br /> ಅತಿವೃಷ್ಟಿಯಿಂದ ತೀವ್ರ ಸಂಕಷ್ಟದಲ್ಲಿ ಇರುವ ಮಲೆನಾಡಿನ ರೈತರ ಸಂಪೂರ್ಣ ಸಾಲವನ್ನು ಒಂದು ಬಾರಿಗೆ ಮನ್ನಾ ಮಾಡಬೇಕೆಂಬ ಜೆಡಿಎಸ್ನ ಎಂ.ಸಿ.ನಾಣಯ್ಯ ಬೇಡಿಕೆ ಯನ್ನು ನಿರಾಕರಿಸಿದ ಮಹದೇವ ಪ್ರಸಾದ್, ‘ಮತ್ತೆ ಸಾಲಮನ್ನಾ ಸಾಧ್ಯವಿಲ್ಲ ಎಂದರು. ರೈತರ ಎಲ್ಲ ಸಮಸ್ಯೆಗಳಿಗೂ ಸಾಲಮನ್ನಾವೇ ಪರಿಹಾರವಲ್ಲ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಸುವರ್ಣಸೌಧ (ಬೆಳಗಾವಿ): </strong>ಪ್ರಸಕ್ತ ಸಾಲಿನ ರೈತರ ಬೆಳೆಸಾಲ ಮನ್ನಾ ಬಾಬ್ತು ₨ 1,185 ಕೋಟಿಯನ್ನು ಸಹಕಾರ ಸಂಘಗಳು ಮತ್ತು ಬ್ಯಾಂಕು ಗಳಿಗೆ ಬಿಡುಗಡೆ ಮಾಡ ಬೇಕಿದೆ ಎಂದು ಸಹಕಾರ ಸಚಿವ ಎಚ್.ಎಸ್. ಮಹದೇವ ಪ್ರಸಾದ್ ಅವರು ಮಂಗಳವಾರ ವಿಧಾನ ಪರಿಷತ್ತಿಗೆ ತಿಳಿಸಿದರು.<br /> <br /> ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಕೋಟ ಶ್ರೀನಿವಾಸ ಪೂಜಾರಿ ಅವರ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಸಾಲ ಮನ್ನಾ ಯೋಜನೆಯಡಿ ಈವರೆಗೆ ₨ 2,073.77 ಕೋಟಿ ಬಿಡುಗಡೆ ಮಾಡಿದೆ. ಬಾಕಿ ಇರುವ ₨ 1,185 ಕೋಟಿಯನ್ನು 2014ರ ಮಾರ್ಚ್ ಅಂತ್ಯದೊಳಗೆ ಪೂರ್ಣ ವಾಗಿ ಪಾವತಿಸಲಾಗುವುದು ಎಂದರು.<br /> <br /> ಒಟ್ಟು 15.38 ಲಕ್ಷ ರೈತರು ಸಾಲ ಮನ್ನಾ ಯೋಜನೆಯ ಅನುಕೂಲ ಪಡೆಯುತ್ತಾರೆ. ಈಗಾಗಲೇ 9.17 ಲಕ್ಷ ರೈತರು ಈ ಯೋಜನೆಯ ಲಾಭ ಪಡೆದಿದ್ದಾರೆ. ಇನ್ನೂ 5.21 ಲಕ್ಷ ರೈತರು ಈ ಯೋಜನೆಯ ಅನುಕೂಲ ಪಡೆಯಲಿದ್ದಾರೆ ಎಂದು ಸದನಕ್ಕೆ ವಿವರ ಒದಗಿಸಿದರು.<br /> <br /> ಸಾಲಮನ್ನಾ ಯೋಜನೆಯ ಬಾಕಿ ಬಿಡುಗಡೆ ಮಾಡದ ಕಾರಣದಿಂದ ರೈತರಿಗೆ ಹೊಸ ಸಾಲ ದೊರೆಯುತ್ತಿಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ಕಾಲಕಾಲಕ್ಕೆ ಸಾಲ ಮನ್ನಾ ಬಾಬ್ತು ಹಣ ಬಿಡುಗಡೆ ಮಾಡಲಾಗು ತ್ತಿದೆ. ಹಿಂದಿನ ವರ್ಷ ಈ ಅವಧಿ ಯಲ್ಲಿನ₨ 3,200 ಕೋಟಿ ಸಾಲ ಹಂಚಿಕೆ ಮಾಡಲಾಗಿತ್ತು. ಈ ವರ್ಷ ಈವರೆಗೆ ₨ 4,300 ಕೋಟಿ ಸಾಲ ವಿತರಿಸಲಾಗಿದೆ ’ ಎಂದರು.<br /> <br /> <strong>ಮತ್ತೆ ಸಾಲ ಮನ್ನಾ ಇಲ್ಲ</strong><br /> ಅತಿವೃಷ್ಟಿಯಿಂದ ತೀವ್ರ ಸಂಕಷ್ಟದಲ್ಲಿ ಇರುವ ಮಲೆನಾಡಿನ ರೈತರ ಸಂಪೂರ್ಣ ಸಾಲವನ್ನು ಒಂದು ಬಾರಿಗೆ ಮನ್ನಾ ಮಾಡಬೇಕೆಂಬ ಜೆಡಿಎಸ್ನ ಎಂ.ಸಿ.ನಾಣಯ್ಯ ಬೇಡಿಕೆ ಯನ್ನು ನಿರಾಕರಿಸಿದ ಮಹದೇವ ಪ್ರಸಾದ್, ‘ಮತ್ತೆ ಸಾಲಮನ್ನಾ ಸಾಧ್ಯವಿಲ್ಲ ಎಂದರು. ರೈತರ ಎಲ್ಲ ಸಮಸ್ಯೆಗಳಿಗೂ ಸಾಲಮನ್ನಾವೇ ಪರಿಹಾರವಲ್ಲ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>