ಬಳ್ಳಾರಿ: ಕೋವಿಡ್ ಹೊಸ ರೂಪ ಕುರಿತು ಆತಂಕ ಪಡುವ ಅಗತ್ಯವಿಲ್ಲ. ಬ್ರಿಟನ್ನಿಂದ ಜಿಲ್ಲೆಗೆ 15 ಮಂದಿ ಬಂದಿದ್ದು, ಎಲ್ಲ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುವುದು ಎಂದು ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದರು.
ಕೋವಿಡ್ ನಿಯಮಾನುಸಾರ ಅವರಿಗೆ ಕ್ವಾರಂಟೈನ್ನಲ್ಲಿರಿಸಿ ಗಂಟಲು ದ್ರವ ಸಂಗ್ರಹಿಸಲಾಗುವುದು ಎಂದು ನಗರದಲ್ಲಿ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.
ಜಿಲ್ಲೆಯಲ್ಲಿ ಕೋವಿಡ್ ಸ್ಥಿತಿಗತಿ ಹಾಗೂ ರೂಪಾಂತರಗೊಂಡ ಕೊರೊನಾ ಕುರಿತು ಸಭೆ ನಡೆಸಲಾಗುವುದು ಎಂದರು.
ಹಳೆಯ ವಿಮ್ಸ್ ಆಸ್ಪತ್ರೆಯ ಶಸ್ತ್ರಚಿಕಿತ್ಸೆ ಕೊಠಡಿಯನ್ನು ನೆಲಸಮಗೊಳಿಸಿ ಜಿಲ್ಲಾ ಖನಿಜ ಪ್ರತಿಷ್ಠಾನ್ ₹ 7 ಕೋಟಿ ವೆಚ್ಛದಲ್ಲಿ ಮತ್ತೆ ನಿರ್ಮಿಸಲಾಗುವುದು ಎಂದರು.