ಬಳ್ಳಾರಿ: ‘ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಸಿಕ್ಕರೆ ಸಂತೋಷ’ ಎಂದು ಸಚಿವ ಶ್ರೀರಾಮುಲು ಮನದಾಸೆ ಬಹಿರಂಗಪಡಿಸಿದರು.
‘ಬಳ್ಳಾರಿ ನನ್ನ ಜನ್ಮಭೂಮಿ; ಉಳಿದ ಜಿಲ್ಲೆಗಳು ಕರ್ಮಭೂಮಿ. ಜನ್ಮಭೂಮಿ ಹೊಣೆ ಸಿಕ್ಕರೆ ಯಾರಿಗೆ ತಾನೆ ಸಂತೋಷ ಆಗುವುದಿಲ್ಲ’ ಎಂದರು.
‘ಕಾಂಗ್ರೆಸ್ ಒಡೆದ ಮನೆ. ಅಲ್ಲಿ ಗುಂಪುಗಾರಿಕೆ ಇದೆ. ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ದೆಹಲಿಗೆ ಹೋದಾಗ ಮಾತ್ರ ಒಂದಾಗ್ತರೆ’ ಎಂದು ಸಚಿವರು ಲೇವಡಿ ಮಾಡಿದರು.
ಈ ನಡುವೆ, ಬಳ್ಳಾರಿಯಿಂದ ವಿಜಯನಗರವನ್ನು ಬೇರ್ಪಡಿಸಲು ಕಾರಣಕರ್ತರಾದ ಆನಂದ್ಸಿಂಗ್ ಅವರಿಗೇ ಬಳ್ಳಾರಿ ಜಿಲ್ಲೆಯ ಉಸ್ತುವಾರಿ ಕೊಟ್ಟಿರುವ ಕುರಿತು ಅಸಮಾಧಾನ ವ್ಯಕ್ತಪಡಿಸಿರುವ ಶಾಸಕ ಸೋಮಶೇಖರ ರೆಡ್ಡಿ, ತಕ್ಷಣ ಅವರನ್ನು ಬದಲಾಯಿಸಬೇಕೆಂದು ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರನ್ನು ಒತ್ತಾಯಿಸಿದ್ದಾರೆ.