<p><strong>ಹೊಸಪೇಟೆ</strong>: ಹರಿದ್ವಾರದ ಪತಂಜಲಿ ಯೋಗ ಪೀಠದ ಬಾಬಾ ರಾಮದೇವ್ ಅವರು ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಸಿಕೊಡುತ್ತಿರುವ ಯೋಗ ಚಿಕಿತ್ಸೆ ಮತ್ತು ಧ್ಯಾನ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.</p>.<p>ಗುರುವಾರ ಶಿಬಿರದ ಎರಡನೇ ದಿನವಾಗಿದ್ದು, ಮೊದಲ ದಿನಕ್ಕಿಂತ ಎರಡನೇ ದಿನ ಹೆಚ್ಚಿನ ಜನ ಸೇರಿದ್ದಾರೆ. ಬೆಳಿಗ್ಗೆ ಐದು ಗಂಟೆಗೆ ಇಡೀ ಕ್ರೀಡಾಂಗಣ ಭರ್ತಿಯಾಗಿದ್ದು, ಸತತವಾಗಿ ಯೋಗ ಮಾಡುತ್ತಿದ್ದಾರೆ.</p>.<p>ಯೋಗದ ವಿವಿಧ ಆಸನಗಳನ್ನು ಜನ ಆಸಕ್ತಿಯಿಂದ ಮಾಡುತ್ತಿದ್ದಾರೆ. ಮೊದಲ ಸಲ ಯೋಗ ಮಾಡುತ್ತಿರುವವರು ಹೆಣಗಾಟ ನಡೆಸುತ್ತಿರುವುದು ಕಂಡು ಬಂತು. ಪತಂಜಲಿ ಕಾರ್ಯಕರ್ತರು ಅಂತಹವರಿಗೆ ಮಾರ್ಗದರ್ಶನ ಮಾಡಿದರು.</p>.<p>ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರು ಭಕ್ತಿಯಿಂದ ಯೋಗ, ಧ್ಯಾನ ಮಾಡುತ್ತಿದ್ದಾರೆ.ಶಿಬಿರವು ಫೆ. 9ರ ವರೆಗೆ ನಡೆಯಲಿದೆ.</p>.<p>ಬಲ್ದೋಟ ಕಂಪನಿ ಶಿಬಿರವನ್ನು ಆಯೋಜಿಸಿದೆ. ನಂದಿಪುರದ ಕಲ್ಯಾಣ ಸ್ವಾಮೀಜಿ ಎರಡನೇ ದಿನದ ಶಿಬಿರವನ್ನು ಉದ್ಘಾಟಿಸಿ, ‘ಯೋಗದ ಮಹತ್ವವನ್ನು ಜಗತ್ತಿಗೆ ಸಾರಿದ ಕೀರ್ತಿ ರಾಮದೇವ್ ಅವರಿಗೆ ಸಲ್ಲುತ್ತದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ</strong>: ಹರಿದ್ವಾರದ ಪತಂಜಲಿ ಯೋಗ ಪೀಠದ ಬಾಬಾ ರಾಮದೇವ್ ಅವರು ಇಲ್ಲಿನ ತಾಲ್ಲೂಕು ಕ್ರೀಡಾಂಗಣದಲ್ಲಿ ನಡೆಸಿಕೊಡುತ್ತಿರುವ ಯೋಗ ಚಿಕಿತ್ಸೆ ಮತ್ತು ಧ್ಯಾನ ಶಿಬಿರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.</p>.<p>ಗುರುವಾರ ಶಿಬಿರದ ಎರಡನೇ ದಿನವಾಗಿದ್ದು, ಮೊದಲ ದಿನಕ್ಕಿಂತ ಎರಡನೇ ದಿನ ಹೆಚ್ಚಿನ ಜನ ಸೇರಿದ್ದಾರೆ. ಬೆಳಿಗ್ಗೆ ಐದು ಗಂಟೆಗೆ ಇಡೀ ಕ್ರೀಡಾಂಗಣ ಭರ್ತಿಯಾಗಿದ್ದು, ಸತತವಾಗಿ ಯೋಗ ಮಾಡುತ್ತಿದ್ದಾರೆ.</p>.<p>ಯೋಗದ ವಿವಿಧ ಆಸನಗಳನ್ನು ಜನ ಆಸಕ್ತಿಯಿಂದ ಮಾಡುತ್ತಿದ್ದಾರೆ. ಮೊದಲ ಸಲ ಯೋಗ ಮಾಡುತ್ತಿರುವವರು ಹೆಣಗಾಟ ನಡೆಸುತ್ತಿರುವುದು ಕಂಡು ಬಂತು. ಪತಂಜಲಿ ಕಾರ್ಯಕರ್ತರು ಅಂತಹವರಿಗೆ ಮಾರ್ಗದರ್ಶನ ಮಾಡಿದರು.</p>.<p>ಮಹಿಳೆಯರು, ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದವರು ಭಕ್ತಿಯಿಂದ ಯೋಗ, ಧ್ಯಾನ ಮಾಡುತ್ತಿದ್ದಾರೆ.ಶಿಬಿರವು ಫೆ. 9ರ ವರೆಗೆ ನಡೆಯಲಿದೆ.</p>.<p>ಬಲ್ದೋಟ ಕಂಪನಿ ಶಿಬಿರವನ್ನು ಆಯೋಜಿಸಿದೆ. ನಂದಿಪುರದ ಕಲ್ಯಾಣ ಸ್ವಾಮೀಜಿ ಎರಡನೇ ದಿನದ ಶಿಬಿರವನ್ನು ಉದ್ಘಾಟಿಸಿ, ‘ಯೋಗದ ಮಹತ್ವವನ್ನು ಜಗತ್ತಿಗೆ ಸಾರಿದ ಕೀರ್ತಿ ರಾಮದೇವ್ ಅವರಿಗೆ ಸಲ್ಲುತ್ತದೆ’ ಎಂದು ಹೇಳಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>