ಹೊಸಪೇಟೆ(ವಿಜಯನಗರ): ತ್ಯಾಗ, ಬಲಿದಾದ ಪ್ರತೀಕವಾಗಿರುವ ಬಕ್ರೀದ್ ಹಬ್ಬವನ್ನು ಮುಸ್ಲಿಮರು ಬುಧವಾರ ನಗರದಲ್ಲಿ ಆಚರಿಸಿದರು.
ಜಿಲ್ಲಾಡಳಿತದ ಮಾರ್ಗಸೂಚಿಯಂತೆ ನಗರದ ವಿವಿಧ ಮಸೀದಿಗಳಲ್ಲಿ ಸಿಮೀತ ಸಂಖ್ಯೆಯ ಜನರೊಂದಿಗೆ ಪ್ರಾರ್ಥನೆ ಸಲ್ಲಿಸಿದರು.
ಬೆಳಿಗ್ಗೆ ಆರು ಗಂಟೆಯಿಂದಲೇ ನಗರದ ಮಸೀದಿಗಳಿಗೆ ತೆರಳಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸಿದರು. ಕೋವಿಡ್ ಕಾರಣಕ್ಕಾಗಿ ಕೆಲವರು ಮನೆಯ ಮಾಳಿಗೆ ಮೇಲೆ ಪ್ರಾರ್ಥನೆ ಮಾಡಿದರು. ಎಲ್ಲ ಮಸೀದಿಗಳ ಸುತ್ತ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ತಾಲ್ಲೂಕಿನ ಮರಿಯಮ್ಮನಹಳ್ಳಿ, ಗಾದಿಗನೂರು, ಬೈಲುವದ್ದಿಗೇರಿ, ಪಾಪಿನಾಯಕನಹಳ್ಳಿ, ಕಮಲಾಪುರ ಸೇರಿದಂತೆ ಗ್ರಾಮೀಣ ಭಾಗಗಳಲ್ಲೂ ಬಕ್ರೀದ್ ಆಚರಿಸಲಾಯಿತು.