ನಗರದ ಕೆನರಾ ಬ್ಯಾಂಕ್, ಭಾರತೀಯ ಸ್ಟೇಟ್ ಬ್ಯಾಂಕ್ ಸೇರಿದಂತೆ ಪ್ರಮುಖ ಬ್ಯಾಂಕುಗಳು ಬಾಗಿಲು ಮುಚ್ಚಿದ್ದರಿಂದ ಗ್ರಾಹಕರು ಬಂದು ಹಿಂತಿರುಗುವುದು ಕಂಡು ಬಂತು. ಅನೇಕ ಎಟಿಎಂಗಳಲ್ಲಿ ಹಣವೇ ಇರಲಿಲ್ಲ. ಕೆಲವೆಡೆ ಇದ್ದರೂ ಉದ್ದನೆಯ ಸಾಲು ಕಂಡು ಬಂತು. ಬ್ಯಾಂಕಿನಲ್ಲಿ ಹಣ ಠೇವಣಿ ಇಡುವವರು, ಕಾಲೇಜಿನ ಶುಲ್ಕ ತುಂಬಲು ಡಿಡಿ ತೆಗೆಸಬೇಕಾದವರು, ಹಣ ಬಿಡಿಸುವವರು ತೀವ್ರ ತೊಂದರೆ ಅನುಭವಿಸಿದರು.