<p><strong>ಹೊಸಪೇಟೆ (ವಿಜಯನಗರ):</strong> ನಗರ ಸೇರಿದಂತೆ ತಾಲ್ಲೂಕಿನ ಹಲವು ಕಡೆಗಳಲ್ಲಿ ಶುಕ್ರವಾರ ಬಸವೇಶ್ವರರ ಜಯಂತಿ ಶ್ರದ್ಧಾ, ಭಕ್ತಿ ಹಾಗೂ ಸರಳ ರೀತಿಯಲ್ಲಿ ಆಚರಿಸಲಾಯಿತು.</p>.<p>ದೇವಸ್ಥಾನ, ಮಠಗಳಲ್ಲಿ ಸಾಂಕೇತಿಕ ಆಚರಣೆಗಷ್ಟೇ ಬಸವ ಜಯಂತಿ ಸೀಮಿತವಾಗಿತ್ತು. ಬಸವ ಭಕ್ತರು ಮನೆಯಲ್ಲೇ ಸರಳವಾಗಿ ಪೂಜೆ, ಪ್ರಾರ್ಥನೆ ನೆರವೇರಿಸಿ ಜಯಂತಿ ಆಚರಿಸಿದರು.</p>.<p>ನಗರದ ಬಸವೇಶ್ವರ ಬಡಾವಣೆ, ಚಿತ್ತವಾಡ್ಗಿ, ಪಟೇಲ್ ನಗರ, ಸ್ಟೇಶನ್ ರಸ್ತೆ, ಅಮರಾವತಿ, ಆಕಾಶವಾಣಿ ಸೇರಿದಂತೆ ಇತರೆ ಬಡಾವಣೆಗಳಲ್ಲಿ ಜನ ಅವರ ಮನೆಯಲ್ಲೇ ಬಸವ ಜಯಂತಿ ಆಚರಿಸಿದರು. ವಿವಿಧೆಡೆ ಬಸವ ಜಯಂತಿ ಆಚರಿಸಿದ ವಿವರ ಇಂತಿದೆ.</p>.<p><strong>ತಾಲ್ಲೂಕು ಆಡಳಿತ</strong></p>.<p>ನಗರದ ತಾಲ್ಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ಸರಳ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎಚ್. ವಿಶ್ವನಾಥ್ ಅವರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪನಮನ ಸಲ್ಲಿಸಿದರು. ಗ್ರೇಡ್– 2 ತಹಶೀಲ್ದಾರ್ ಮೇಘನಾ, ಶಿರಸ್ತೇದಾರ ಶ್ರೀಧರ್, ರಮೇಶ್, ಆಹಾರ ಇಲಾಖೆಯ ಮಂಜುನಾಥ್, ಬಸವ ಬಳಗದ ಸದಸ್ಯ ಬಸವಲಿಂಗಪ್ಪ ಇದ್ದರು.</p>.<p><strong>ಕೊಟ್ಟೂರುಸ್ವಾಮಿ ಮಠ</strong></p>.<p>ನಗರದ ಕೊಟ್ಟೂರು ಸ್ವಾಮಿ ಮಠದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಸಂಗನಬಸವ ಸ್ವಾಮೀಜಿ, ಮುಪ್ಪಿನ ಬಸವಲಿಂಗ ದೇವರು ಹಾಲ್ಕೆರೆ ಪೂಜೆ ನೆರವೇರಿಸಿದರು.</p>.<p>ಸಂಗನಬಸವ ಸ್ವಾಮೀಜಿ ಮಾತನಾಡಿ, ‘ಮಠದಿಂದ ಪ್ರತಿವರ್ಷ ಬಸವ ಜಯಂತಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಸಾಮೂಹಿಕ ವಿವಾಹ, ಪ್ರವಚನ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಆದರೆ, ಕೋವಿಡ್ನಿಂದ ಎರಡು ವರ್ಷಗಳಿಂದ ಸರಳವಾಗಿ ಜಯಂತಿ ಆಚರಿಸಲಾಗುತ್ತಿದೆ’ ಎಂದರು.</p>.<p>‘ಕೊರೊನಾ ಮಹಾಮಾರಿಯಿಂದ ಇಡೀ ಜಗತ್ತು ಸಂಕಷ್ಟಕ್ಕೆ ಒಳಗಾಗಿದೆ. ಈ ರೋಗ ದೂರವಾಗುವವರೆಗೆ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು ವ್ಯವಹರಿಸಬೇಕು. ಬಡವರು, ನಿರ್ಗತಿಕರಿಗೆ ಕೈಲಾದಷ್ಟು ಸಹಾಯ ಮಾಡಬೇಕು. ಆದಷ್ಟು ಬೇಗ ಈ ರೋಗ ದೂರವಾಗಿ ಜನಜೀವನ ಸಹಜ ಸ್ಥಿತಿಗೆ ಮರಳಬೇಕು’ ಎಂದು ಹಾರೈಸಿದರು.</p>.<p>ಶರಣಯ್ಯ ಸ್ವಾಮಿ, ಶರಣು ಸ್ವಾಮಿ, ಕೊಟ್ಟೂರು ದೇಶಿಕರು ದರೂರು, ಕುಮಾರಸ್ವಾಮಿ, ಎಚ್.ಎಂ. ಜಂಬಯ್ಯ ಇತರರಿದ್ದರು.</p>.<p><strong>ಇಷ್ಟಲಿಂಗ ಸಂಶೋಧನಾ ಕೇಂದ್ರ</strong></p>.<p>ತಾಲ್ಲೂಕಿನ ಧರ್ಮದಗುಡ್ಡ ಬಳಿಯ ಇಷ್ಟಲಿಂಗ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಸರಳವಾಗಿ ಬಸವ ಜಯಂತಿ ಆಚರಿಸಲಾಯಿತು. ಡಾ. ಅಜಯಕುಮಾರ್ ತಾಂಡೂರು, ಬಸವರಾಜ, ಬಸವರಾಜ ಮಾವಿನಹಳ್ಳಿ, ಓಂಪ್ರಕಾಶ, ಶ್ರೀನಿವಾಸ ಇದ್ದರು.</p>.<p><strong>ಅಕ್ಕನ ಬಳಗ</strong></p>.<p>ನಗರದ ಬಸವೇಶ್ವರ ಬಡಾವಣೆಯ ಅಕ್ಕಮಹಾದೇವಿ ಭವನದಲ್ಲಿ ಅಕ್ಕನ ಬಳಗ ಹಾಗೂ ಬಸವ ಬಳಗದಿಂದ ಬಸವ ಜಯಂತಿ ಆಚರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ (ವಿಜಯನಗರ):</strong> ನಗರ ಸೇರಿದಂತೆ ತಾಲ್ಲೂಕಿನ ಹಲವು ಕಡೆಗಳಲ್ಲಿ ಶುಕ್ರವಾರ ಬಸವೇಶ್ವರರ ಜಯಂತಿ ಶ್ರದ್ಧಾ, ಭಕ್ತಿ ಹಾಗೂ ಸರಳ ರೀತಿಯಲ್ಲಿ ಆಚರಿಸಲಾಯಿತು.</p>.<p>ದೇವಸ್ಥಾನ, ಮಠಗಳಲ್ಲಿ ಸಾಂಕೇತಿಕ ಆಚರಣೆಗಷ್ಟೇ ಬಸವ ಜಯಂತಿ ಸೀಮಿತವಾಗಿತ್ತು. ಬಸವ ಭಕ್ತರು ಮನೆಯಲ್ಲೇ ಸರಳವಾಗಿ ಪೂಜೆ, ಪ್ರಾರ್ಥನೆ ನೆರವೇರಿಸಿ ಜಯಂತಿ ಆಚರಿಸಿದರು.</p>.<p>ನಗರದ ಬಸವೇಶ್ವರ ಬಡಾವಣೆ, ಚಿತ್ತವಾಡ್ಗಿ, ಪಟೇಲ್ ನಗರ, ಸ್ಟೇಶನ್ ರಸ್ತೆ, ಅಮರಾವತಿ, ಆಕಾಶವಾಣಿ ಸೇರಿದಂತೆ ಇತರೆ ಬಡಾವಣೆಗಳಲ್ಲಿ ಜನ ಅವರ ಮನೆಯಲ್ಲೇ ಬಸವ ಜಯಂತಿ ಆಚರಿಸಿದರು. ವಿವಿಧೆಡೆ ಬಸವ ಜಯಂತಿ ಆಚರಿಸಿದ ವಿವರ ಇಂತಿದೆ.</p>.<p><strong>ತಾಲ್ಲೂಕು ಆಡಳಿತ</strong></p>.<p>ನಗರದ ತಾಲ್ಲೂಕು ಕಚೇರಿಯಲ್ಲಿ ಏರ್ಪಡಿಸಿದ್ದ ಸರಳ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಎಚ್. ವಿಶ್ವನಾಥ್ ಅವರು ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ಪನಮನ ಸಲ್ಲಿಸಿದರು. ಗ್ರೇಡ್– 2 ತಹಶೀಲ್ದಾರ್ ಮೇಘನಾ, ಶಿರಸ್ತೇದಾರ ಶ್ರೀಧರ್, ರಮೇಶ್, ಆಹಾರ ಇಲಾಖೆಯ ಮಂಜುನಾಥ್, ಬಸವ ಬಳಗದ ಸದಸ್ಯ ಬಸವಲಿಂಗಪ್ಪ ಇದ್ದರು.</p>.<p><strong>ಕೊಟ್ಟೂರುಸ್ವಾಮಿ ಮಠ</strong></p>.<p>ನಗರದ ಕೊಟ್ಟೂರು ಸ್ವಾಮಿ ಮಠದಲ್ಲಿ ಬಸವೇಶ್ವರರ ಭಾವಚಿತ್ರಕ್ಕೆ ಸಂಗನಬಸವ ಸ್ವಾಮೀಜಿ, ಮುಪ್ಪಿನ ಬಸವಲಿಂಗ ದೇವರು ಹಾಲ್ಕೆರೆ ಪೂಜೆ ನೆರವೇರಿಸಿದರು.</p>.<p>ಸಂಗನಬಸವ ಸ್ವಾಮೀಜಿ ಮಾತನಾಡಿ, ‘ಮಠದಿಂದ ಪ್ರತಿವರ್ಷ ಬಸವ ಜಯಂತಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಸಾಮೂಹಿಕ ವಿವಾಹ, ಪ್ರವಚನ ಸೇರಿದಂತೆ ಇತರೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಆದರೆ, ಕೋವಿಡ್ನಿಂದ ಎರಡು ವರ್ಷಗಳಿಂದ ಸರಳವಾಗಿ ಜಯಂತಿ ಆಚರಿಸಲಾಗುತ್ತಿದೆ’ ಎಂದರು.</p>.<p>‘ಕೊರೊನಾ ಮಹಾಮಾರಿಯಿಂದ ಇಡೀ ಜಗತ್ತು ಸಂಕಷ್ಟಕ್ಕೆ ಒಳಗಾಗಿದೆ. ಈ ರೋಗ ದೂರವಾಗುವವರೆಗೆ ಪ್ರತಿಯೊಬ್ಬರೂ ಮಾಸ್ಕ್ ಧರಿಸಿ, ಅಂತರ ಕಾಯ್ದುಕೊಂಡು ವ್ಯವಹರಿಸಬೇಕು. ಬಡವರು, ನಿರ್ಗತಿಕರಿಗೆ ಕೈಲಾದಷ್ಟು ಸಹಾಯ ಮಾಡಬೇಕು. ಆದಷ್ಟು ಬೇಗ ಈ ರೋಗ ದೂರವಾಗಿ ಜನಜೀವನ ಸಹಜ ಸ್ಥಿತಿಗೆ ಮರಳಬೇಕು’ ಎಂದು ಹಾರೈಸಿದರು.</p>.<p>ಶರಣಯ್ಯ ಸ್ವಾಮಿ, ಶರಣು ಸ್ವಾಮಿ, ಕೊಟ್ಟೂರು ದೇಶಿಕರು ದರೂರು, ಕುಮಾರಸ್ವಾಮಿ, ಎಚ್.ಎಂ. ಜಂಬಯ್ಯ ಇತರರಿದ್ದರು.</p>.<p><strong>ಇಷ್ಟಲಿಂಗ ಸಂಶೋಧನಾ ಕೇಂದ್ರ</strong></p>.<p>ತಾಲ್ಲೂಕಿನ ಧರ್ಮದಗುಡ್ಡ ಬಳಿಯ ಇಷ್ಟಲಿಂಗ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ ಸರಳವಾಗಿ ಬಸವ ಜಯಂತಿ ಆಚರಿಸಲಾಯಿತು. ಡಾ. ಅಜಯಕುಮಾರ್ ತಾಂಡೂರು, ಬಸವರಾಜ, ಬಸವರಾಜ ಮಾವಿನಹಳ್ಳಿ, ಓಂಪ್ರಕಾಶ, ಶ್ರೀನಿವಾಸ ಇದ್ದರು.</p>.<p><strong>ಅಕ್ಕನ ಬಳಗ</strong></p>.<p>ನಗರದ ಬಸವೇಶ್ವರ ಬಡಾವಣೆಯ ಅಕ್ಕಮಹಾದೇವಿ ಭವನದಲ್ಲಿ ಅಕ್ಕನ ಬಳಗ ಹಾಗೂ ಬಸವ ಬಳಗದಿಂದ ಬಸವ ಜಯಂತಿ ಆಚರಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>