ಘಟನೆಯಲ್ಲಿ ಅದೇ ದಿನ ಸಂಜೆ ಸುಮಿತ್ರಾ ಮೃತಪಟ್ಟಿದ್ದಾರೆ. ಬಳ್ಳಾರಿಯ ವಿಮ್ಸ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂರು ವರ್ಷದ ನಂದೀಶ್ ಡಿ. 12ರಂದು, ಸರಸ್ವತಿ ಡಿ. 13ರಂದು ಸಾವನ್ನಪ್ಪಿದ್ದಾರೆ. ಫಕೀರಮ್ಮ, ಮಂಜುಳಾ ಅವರು ಗಂಭೀರ ಗಾಯಗೊಂಡಿದ್ದರು. ಈ ಸಂಬಂಧ ಪೊಲೀಸ್ ಇನ್ಸ್ಪೆಕ್ಟರ್ ಸಲೀಂ ಪಾಷಾ ಎಂಬುವರು ರುದ್ರಪ್ಪ ವಿರುದ್ಧ ಕಲಂ 279, 337, 304(ಎ), ಐಪಿಸಿ ರೆ/ವಿ 3, ರೆ/ವಿ 181, 5 ರೆ/ವಿ 180 ಎಂ.ವಿ. ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ದೋಷಾರೋಪಣ ಪತ್ರ ಸಲ್ಲಿಸಿದ್ದರು.