ತುರ್ತು ಕೆಲಸದ ನಿಮಿತ್ತ ಆನಂದ್ ಸಿಂಗ್ ಅವರು ಹೆಲಿಕ್ಯಾಪ್ಟರ್ ಮೂಲಕ ಬೆಂಗಳೂರಿಗೆ ಪಯಣ ಬೆಳೆಸಿದರು. ಅಶ್ವತ್ಥನಾರಾಯಣ ಅವರು ನುಡಿಹಬ್ಬದಲ್ಲಿ ಪಾಲ್ಗೊಂಡು ಕಾರ್ಯಕ್ರಮದ ಕೊನೆಯ ವರೆಗೆ ಇದ್ದರು. ಶಾಸಕ ಜಿ. ಸೋಮಶೇಖರ್ ರೆಡ್ಡಿ, ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಮ್ಮೂರು ಶೇಖರ್, ಹೆಚ್ಚುವರಿ ಎಸ್ಪಿ ಎನ್. ಲಾವಣ್ಯ, ಡಿವೈಎಸ್ಪಿ ಕಾಶಿಗೌಡ, ಇನ್ಸ್ಪೆಕ್ಟರ್ ವೈ. ಶಶಿಧರ್ ಇದ್ದರು.