ಹೊಸಪೇಟೆ (ವಿಜಯನಗರ): ನಗರದಲ್ಲಿ ಸುಸಜ್ಜಿತ ಗುರು ಭವನ ನಿರ್ಮಿಸಬೇಕೆಂದು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಮನವಿ ಮಾಡಿದೆ.
ಬುಧವಾರ ಈ ಸಂಬಂಧ ಸಂಘದ ಪ್ರಮುಖರು ಪ್ರವಾಸೋದ್ಯಮ, ಪರಿಸರ, ಜೀವಿಶಾಸ್ತ್ರ ಖಾತೆ ಸಚಿವ ಆನಂದ್ ಸಿಂಗ್ ಅವರಿಗೆ ಮನವಿ ಪತ್ರ ಸಲ್ಲಿಸಿ ಮನವಿ ಮಾಡಿದರು.
15 ವರ್ಷಗಳಿಂದ ಗುರು ಭವನ ನಿರ್ಮಾಣ ಕೆಲಸ ನನೆಗುದಿಗೆ ಬಿದ್ದಿದೆ. ಈ ಸಂಬಂಧ ಹಲವು ಸಲ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ವಿಜಯನಗರ ಜಿಲ್ಲೆ ರಚನೆಗೆ ಕಾರಣರಾಗಿರುವ ತಾವು ಗುರು ಭವನ ನಿರ್ಮಾಣದ ಕನಸು ನನಸು ಮಾಡಬೇಕು ಎಂದು ಕೋರಿದರು.
ಶೀಘ್ರ ಗುರು ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಮುಂದಿನ ಶಿಕ್ಷಕರ ದಿನಾಚರಣೆ ಅಲ್ಲಿಯೇ ನಡೆಯಲು ಅನುವು ಮಾಡಿಕೊಡಬೆಕು. ಇದು ಶಿಕ್ಷಕ ಸಮುದಾಯಕ್ಕೆ ಕೊಟ್ಟ ದೊಡ್ಡ ಕೊಡುಗೆಯಾಗುತ್ತದೆ ಎಂದು ತಿಳಿಸಿದರು.
ಗೌರವ ಅಧ್ಯಕ್ಷ ಬಿ.ಕೆ. ಹೇಮರೆಡ್ಡಿ, ಉಪಾಧ್ಯಕ್ಷ ಕೆ. ಬಸವರಾಜ, ಸಹಕಾರ್ಯದರ್ಶಿ ಕೆ. ಬಸವನಗೌಡ ಇತರರಿದ್ದರು.