ಸಹ ಪ್ರಾಧ್ಯಾಪಕ ಎಸ್.ಎ.ಗೋವರ್ಧನ್, ‘ಧಾರ್ಮಿಕ ಹಾಗೂ ಜಾತಿ ನೆಲೆಯಲ್ಲಿ ವ್ಯಕ್ತಿಯನ್ನು ಗುರುತಿಸುತ್ತಿರುವುದು ದುರದೃಷ್ಟಕರ ಸಂಗತಿ. ಅನ್ನ, ಬಟ್ಟೆ ಹೊಂದಿರುವವರು ನೈಜ ಸ್ವಾತಂತ್ರ್ಯವನ್ನು ಹೊಂದಿರುವವರು ಎಂದು ಬಾಬು ಜಗಜೀವನ್ರಾಂ ಅವರು ಬಲವಾಗಿ ನಂಬಿದ್ದರು. ದಲಿತರ ಮತ್ತು ದಲಿತೇತರರ ವಿಮೋಚನೆಗಾಗಿ ಹಗಲಿರುಳು ಹೋರಾಟ ನಡೆಸಿದ್ದರು. ಹಸಿವು, ಆರೋಗ್ಯ, ಅಭಿವೃದ್ಧಿ ಎಲ್ಲರಿಗೂ ಒಂದೇ ಎಂದು ಹೇಳಿದ್ದರು’ ಎಂದು ತಿಳಿಸಿದರು.