ವಿಶೇಷ ರೀತಿಯಲ್ಲಿ ಅಲಂಕರಿಸಿದ ಪಲ್ಲಕ್ಕಿಯಲ್ಲಿ ದೇವಿಯನ್ನು ಹೊತ್ತು, ತಮಟೆ ಬಾರಿಸುತ್ತ ಪ್ರತಿಯೊಂದು ಮನೆಗಳಿಗೆ ಹೋಗುತ್ತಾರೆ. ಮನೆ ಮಂದಿಯೆಲ್ಲ ಸ್ವಾಗತಿಸಿ, ಹೂ, ಕಾಯಿ ಒಡೆದು, ನೈವೇದ್ಯ ಸಮರ್ಪಿಸುತ್ತಾರೆ. ಹೀಗಾಗಿ ಕೇರಿಗಳಲ್ಲಿ ಸಂಭ್ರಮ ಮನೆ ಮಾಡಿರುತ್ತದೆ. ಈ ಸಂದರ್ಭಕ್ಕಾಗಿಯೇ ಕಾಯುವ ಕೇರಿಯ ಜನ ತಳಿರು, ತೋರಣಗಳಿಂದ ಇಡೀ ಕೇರಿಯನ್ನು ಅಲಂಕರಿಸುತ್ತಾರೆ. ಆಯುಧ ಪೂಜೆಯ ದಿನ ಎಲ್ಲ ದೇವತೆಗಳನ್ನು ಒಟ್ಟಿಗೆ ಬೀಳ್ಕೊಡುವುದು ವಿಶೇಷ. ಮರುದಿನ ಬನ್ನಿ ಮುಡಿದು, ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಾರೆ.