ಕಂಪ್ಲಿ ಸೇರಿದಂತೆ ತಿಮ್ಮಲಾಪುರ, ಕಮಲಾಪುರ, ದೇವಸಮುದ್ರ ಭಾಗದ ರೈತರು ತೋಟಗಾರಿಕೆ ಇಲಾಖೆಯಿಂದ ಸಹಾಯಧನ ಪಡೆದು ಸಾವಯವ ಪದ್ಧತಿಯಿಂದ ಬೆಳೆದ ಜಿ-9, ಸುಗಂಧಿ ತಳಿಯ ಬಾಳೆ, ತೆಂಗು, ಪಪ್ಪಾಯ, ಪೇರಲ ಹಾಗೂ ತರಕಾರಿ ಬೆಳೆಗಳಾದ ದೊಣ್ಣೆಮೆಣಸಿನಕಾಯಿ, ಮೂಲಂಗಿ, ಬೀನ್ಸ್ ಹಾಗೂ ಮೆಣಸಿನಕಾಯಿಯನ್ನು ಪ್ರದರ್ಶನಕ್ಕೆ ಇಟ್ಟು ಇತರ ರೈತರಿಗೂ ಇಲಾಖೆಯ ಸಹಾಯಧನದಿಂದ ಬೆಳೆ ಬೆಳೆಯಬಹುದು ಎಂಬ ಮಾಹಿತಿಯನ್ನು ನೀಡುತ್ತಿದ್ದೇವೆ, ರೈತರು ಸಹ ಆಸಕ್ತಿ ವಹಿಸಿ ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದಾರೆ ತೋಟಗಾರಿಕೆ ಇಲಾಖೆಯ ಎಲ್.ಇ.ಡಿ ತಿರ್ಲಾಪುರ ಅವರು ತಿಳಿಸಿದರು.