ನಗರದ ಒಳಾಂಗಣ ಕ್ರೀಡಾಂಗಣ, ಜಂಬುನಾಥ ರಸ್ತೆಯ ಅಂಬೇಡ್ಕರ್ ಶಾಲೆ, ರೋಟರಿ ಹಾಲ್, ನೆಹರೂ ಕಾಲೊನಿಯ ಪುಣ್ಯಮೂರ್ತಿ ಶಾಲೆ, ಟಿ.ಬಿ. ಡ್ಯಾಂ ಪ್ರಾಥಮಿಕ ಆರೋಗ್ಯ ಕೇಂದ್ರ, ಪಟ್ಟಣ ಪೊಲೀಸ್ ಠಾಣೆ, ಸರ್ಕಾರಿ ನೌಕರರ ಭವನ, ಕೆಎಸ್ಆರ್ಟಿಸಿ ಡಿಪೊ, ಚಿತ್ತವಾಡ್ಗಿಯ ಸರ್ಕಾರಿ ಪ್ರಾಥಮಿಕ ಶಾಲೆ, ವಿನೋಬಾ ಭಾವೆ ಪ್ರೌಢಶಾಲೆ, ತಾಲ್ಲೂಕಿನ ಕಮಲಾಪುರ ವಾಲ್ಮೀಕಿ ಭವನ, ರೈತ ಭವನ, ಮರಿಯಮ್ಮನಹಳ್ಳಿ ಸರ್ಕಾರಿ ಪ್ರೌಢಶಾಲೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಲಸಿಕೆ ನೀಡಲಾಯಿತು. ಸಂಜೆ ವರೆಗೂ ಜನದಟ್ಟಣೆ ಕಂಡು ಬಂತು.