ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸಪೇಟೆ: ಅಂಧ ಮಕ್ಕಳಿಗೆ ನೆರವು

Last Updated 1 ನವೆಂಬರ್ 2021, 7:21 IST
ಅಕ್ಷರ ಗಾತ್ರ

ಹೊಸಪೇಟೆ (ವಿಜಯನಗರ): ಇಲ್ಲಿನ ವಿಜಯನಗರ ಕಾಲೊನಿಯಲ್ಲಿರುವ ವಿಶ್ವಚೇತನ ಅಂಧಮಕ್ಕಳ ಶಾಲೆಗೆ ಬೆಂಗಳೂರಿನ ಮಹಿಳಾ ಬೈಕರ್ಸ್ ತಂಡ ನೆರವು ನೀಡಿದೆ.

ಬೆಂಗಳೂರಿನ ‘ಶಿ ಫಾರ್’ ಸೊಸೈಟಿ, ರೋಟರಿ ಇನ್ನರ್ ವೀಲ್, ಕೋವೆ ಕರ್ನಾಟಕ ಹಾಗೂ ಸ್ಪರ್ಶ ಸಂಸ್ಥೆಯ ಸದಸ್ಯರು ಶಾಲೆಯ ಅಂಧ ಮಕ್ಕಳಿಗೆ ಒಂದು ತಿಂಗಳ ಪಡಿತರ, ಬ್ರೈಲ್ ಲಿಪಿ ಸಾಧನ, ‌ಸ್ಟಿಕ್, ಕುರ್ಚಿ, ಪ್ರಿಂಟರ್ ಮತ್ತು ಹಾರ್ಮೋನಿಯಂ ವಿತರಿಸಿದರು.

ಮಹಿಳಾ ಬೈಕರ್ ಹರ್ಷಿಣಿ ವೆಂಕಟೇಶ್ ಮಾತನಾಡಿ, ‘ಸಮಾಜದ ವಿವಿಧ ಕ್ಷೇತ್ರದವರಿಗೆ ನೆರವು ನೀಡಲಾಗುತ್ತಿದೆ. ಈ ಸಲ ಇಲ್ಲಿಗೆ ಬಂದಿರುವುದರಿಂದ ಶಾಲೆಯ ಅಂಧ ಮಕ್ಕಳಿಗೆ ಸಹಾಯ ಮಾಡಲಾಗಿದೆ’ ಎಂದರು.

ಗಾಯತ್ರಿ, ವಿಶ್ವಚೇತನ ಶಾಲೆಯ ಗಂಗಾಧರ ಗಡದ್, ಭೂಮಿಕಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT