ಹೊಸಪೇಟೆ: ಅಂಧ ಮಕ್ಕಳಿಗೆ ನೆರವು

ಹೊಸಪೇಟೆ (ವಿಜಯನಗರ): ಇಲ್ಲಿನ ವಿಜಯನಗರ ಕಾಲೊನಿಯಲ್ಲಿರುವ ವಿಶ್ವಚೇತನ ಅಂಧಮಕ್ಕಳ ಶಾಲೆಗೆ ಬೆಂಗಳೂರಿನ ಮಹಿಳಾ ಬೈಕರ್ಸ್ ತಂಡ ನೆರವು ನೀಡಿದೆ.
ಬೆಂಗಳೂರಿನ ‘ಶಿ ಫಾರ್’ ಸೊಸೈಟಿ, ರೋಟರಿ ಇನ್ನರ್ ವೀಲ್, ಕೋವೆ ಕರ್ನಾಟಕ ಹಾಗೂ ಸ್ಪರ್ಶ ಸಂಸ್ಥೆಯ ಸದಸ್ಯರು ಶಾಲೆಯ ಅಂಧ ಮಕ್ಕಳಿಗೆ ಒಂದು ತಿಂಗಳ ಪಡಿತರ, ಬ್ರೈಲ್ ಲಿಪಿ ಸಾಧನ, ಸ್ಟಿಕ್, ಕುರ್ಚಿ, ಪ್ರಿಂಟರ್ ಮತ್ತು ಹಾರ್ಮೋನಿಯಂ ವಿತರಿಸಿದರು.
ಮಹಿಳಾ ಬೈಕರ್ ಹರ್ಷಿಣಿ ವೆಂಕಟೇಶ್ ಮಾತನಾಡಿ, ‘ಸಮಾಜದ ವಿವಿಧ ಕ್ಷೇತ್ರದವರಿಗೆ ನೆರವು ನೀಡಲಾಗುತ್ತಿದೆ. ಈ ಸಲ ಇಲ್ಲಿಗೆ ಬಂದಿರುವುದರಿಂದ ಶಾಲೆಯ ಅಂಧ ಮಕ್ಕಳಿಗೆ ಸಹಾಯ ಮಾಡಲಾಗಿದೆ’ ಎಂದರು.
ಗಾಯತ್ರಿ, ವಿಶ್ವಚೇತನ ಶಾಲೆಯ ಗಂಗಾಧರ ಗಡದ್, ಭೂಮಿಕಾ ಇದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.