ಅಷ್ಟೇ ಅಲ್ಲ, ಸೋಂಕು ತಗುಲಿಸಿಕೊಂಡಿರುವವರು ಚಪ್ಪರದಹಳ್ಳಿಯ ಮದೀನಾ ಮಸೀದಿಯಲ್ಲಿ ಮಾ. 20ರಂದು ಪ್ರಾರ್ಥನೆಗೆ ಹೋಗಿದ್ದರು. ಈ ವೇಳೆ ಅನೇಕರು ಅಲ್ಲಿಗೆ ಬಂದಿದ್ದರು. ಅವರಿಗೂ ಸೋಂಕು ಹರಡಿರುವ ಸಾಧ್ಯತೆ ಇರುವುದರಿಂದ ಆ ದಿನ ಪ್ರಾರ್ಥನೆಗೆ ಹೋಗಿದ್ದವರು ಆಸ್ಪತ್ರೆಗೆ ಹೋಗಿ ತಪಾಸಣೆ ಮಾಡಿಸಿಕೊಳ್ಳುವಂತೆ ತಿಳಿಸಲಾಗಿದೆ. ಅವರ ವಿವರ ಕಲೆ ಹಾಕುವ ಕೆಲಸವೂ ನಡೆದಿದೆ.