'ದೆಹಲಿಯಲ್ಲಿ ರೈತರ ಹೋರಾಟ ಐವತ್ತೆರಡು ದಿನಗಳನ್ನು ಪೂರೈಸಿದ್ದು, ಅದನ್ನು ಬೆಂಬಲಿಸಿ ರಾಜ್ಯದಲ್ಲಿ ಪ್ರಜಾಸತ್ತಾತ್ಮಕ ಸಂಘಟನೆಗಳು ಹಮ್ಮಿಕೊಂಡಿರುವ ನಾಲ್ಕು ವಲಯಗಳ ಜಾಥಾ ಬಳ್ಳಾರಿಯಲ್ಲಿ 29 ರಂದು ಉದ್ಘಾಟನೆಯಾಗಲಿದೆ. ಅದರ ಅಂಗವಾಗಿ ಸಮಿತಿಯು ಮಧ್ಯ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಜಾಗೃತಿ ಮೂಡಿಸಲು ಸಂಚರಿಸಲಿದೆ. ಪೂರ್ವಸಿದ್ಧತೆಯ ಭಾಗವಾಗಿ ಜ. 27 ಮತ್ತು 28ರಂದು ಜಾಗೃತಿ ಗೀತೆ ಗಾಯನ ತರಬೇತಿ ಕಾರ್ಯಾಗಾರ ವನ್ನು ಏರ್ಪಡಿಸಲಾಗುವುದು' ಎಂದರು.