ಈಗ ಕೋಟೆ ಗೋಡೆಯನ್ನು ಮೊದಲಿನಂತೆ ನಿರ್ಮಿಸಲಾಗುತ್ತಿದೆ. ಆದರೆ, ಅದರ ಬೃಹತ್ ಕಲ್ಲುಗಳನ್ನು ಈ ಹಿಂದಿನಂತೆ ಮರು ಜೋಡಿಸಿ, ಕೋಟೆ ಗೋಡೆ ಕಟ್ಟುತ್ತಿಲ್ಲ. ಬದಲಾಗಿ ಆ ಕಲ್ಲುಗಳನ್ನು ತುಂಡರಿಸಿ, ಅವುಗಳನ್ನು ಸೈಜುಗಲ್ಲುಗಳಂತೆ ಮಾಡಿ ಗೋಡೆ ಕಟ್ಟಲಾಗುತ್ತಿದೆ. ಇದಕ್ಕೆ ವಿಜಯನಗರ ಸ್ಮಾರಕ ಸಂಸ್ಕೃತಿ ಸಂರಕ್ಷಣ ಸೇನೆ ವಿರೋಧ ವ್ಯಕ್ತಪಡಿಸಿದೆ.