ಬೆಳಗಾವಿ, ತುಮಕೂರು ಹಾಗೂ ಶಿವಮೊಗ್ಗ ಕೂಡ ದೊಡ್ಡ ಜಿಲ್ಲೆಗಳಾಗಿವೆ. ಆದರೆ, ಅವುಗಳ ವಿಭಜನೆ ಮಾಡುತ್ತಿಲ್ಲ. ಆದರೆ, ಬಳ್ಳಾರಿ ಜಿಲ್ಲೆಯೇಕೆ ವಿಭಜಿಸಲಾಗುತ್ತಿದೆ. ಕಾನೂನು ಪ್ರಕಾರ, ಜಲಾಶಯದ ಕೆಳಭಾಗದಲ್ಲಿ ನಗರ ನಿರ್ಮಿಸಬಾರದು. ಹೊಸಪೇಟೆ ಜಿಲ್ಲಾ ಕೇಂದ್ರವಾಗಿ ಬೆಳೆಯಲು ಸಾಕಷ್ಟು ಅಡೆತಡೆಗಳಿವೆ. ಒಂದು ಕಡೆ ಜಲಾಶಯ, ಇನ್ನೊಂದೆಡೆ ಬೆಟ್ಟಗುಡ್ಡ, ಮತ್ತೊಂದೆಡೆ ಹಂಪಿ ಇದೆ. ಯಾವುದೇ ಪೂರ್ವಾಪರ ಯೋಚಿಸದೆ ಜಿಲ್ಲೆ ವಿಭಜನೆಗೆ ಮುಂದಾಗಿರುವುದು ಸರಿಯಲ್ಲ ಎಂದು ಸಮಿತಿಯ ಮುಖಂಡರು ಅಭಿಪ್ರಾಯ ಪಟ್ಟಿದ್ದಾರೆ.