‘ಹಂಪಿ ಉತ್ಸವದಲ್ಲಿ ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂಬುದು ಜಿಲ್ಲಾಡಳಿತ ಸದಾಶಯ. ಹಾಗಾಗಿ ಎಲ್ಲರ ಮನೆಗೆ ಹೋಗಿ ಆಹ್ವಾನಿಸುತ್ತಿದ್ದೇವೆ. ನಾನು ಹಾಗೂ ಸಂಸದರು ನೆಹರೂ ಕಾಲೊನಿಯಲ್ಲಿ ಈ ಕೆಲಸ ಮಾಡಿದರೆ, ಬೇರೆ ಬಡಾವಣೆಗಳಲ್ಲಿ ನಮ್ಮ ಅಧಿಕಾರಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಮನೆ ಮನೆಗೆ ಹೋಗಿ ಆಹ್ವಾನಿಸುತ್ತಾರೆ’ ಎಂದು ಜಿಲ್ಲಾಧಿಕಾರಿ ರಾಮಪ್ರಸಾದ್ ಮನೋಹರ್ ತಿಳಿಸಿದರು.