'ಅವ್ಯವಸ್ಥೆ ನಡುವೆ ಸಾಗಿದೆ ಬದುಕು' ಶೀರ್ಷಿಕೆ ಅಡಿ ಬುಧವಾರ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಕನಿಷ್ಠ ಮೂಲಸೌಕರ್ಯಗಳಿಲ್ಲದೆ ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದಾರೆ ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು. ಚರಂಡಿ ಅವ್ಯವಸ್ಥೆ ಕಂಡು, ನಗರಸಭೆಯ ಪೌರಕಾರ್ಮಿಕರನ್ನು ಸ್ಥಳಕ್ಕೆ ಕರೆಸಿಕೊಂಡು ಅವರಿಂದ ಸ್ವಚ್ಛತೆಗೆ ಏರ್ಪಾಟು ಮಾಡಿದರು. ಸಂಪೂರ್ಣ ಕೆಲಸ ಮುಗಿಯುವವರೆಗೆ ಸ್ಥಳದಲ್ಲಿಯೇ ಇದ್ದರು. ತ್ಯಾಜ್ಯವನ್ನು ಬೇರೆಡೆ ಸಾಗಿಸಲು ಸೂಚಿಸಿದರು. ಬಳಿಕ ಕೆಟ್ಟು ಹೋದ ರಸ್ತೆಗಳನ್ನು ವೀಕ್ಷಿಸಿದರು.