ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು, ಜನರ ಸಮಸ್ಯೆಗಳನ್ನು ತಿಳಿದುಕೊಂಡು ಅವುಗಳಿಗೆ ಪರಿಹಾರ ಒದಗಿಸಲು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆ ನಡೆಸಲು ಕಚೇರಿಯನ್ನು ಆರಂಭಿಸಲಾಗಿದೆ. ಸಂಸದರ ಅನುದಾನದಲ್ಲಿ ಅತಿಹೆಚ್ಚನ್ನು ನನ್ನ ಸ್ವಂತ ಜಿಲ್ಲೆಗೆ ವ್ಯಯಿಸಲಾಗುವುದು. ಲೋಕಸಭಾ ಸದಸ್ಯರಿಗೆ ಕಚೇರಿ ಶಾಶ್ವತವಾಗಿರುತ್ತದೆ. ರಾಜ್ಯಸಭಾ ಸದಸ್ಯರಿಗೆ ಇರುವುದಿಲ್ಲ. ಆದರೆ ನನ್ನ ಕೋರಿಕೆಗೆ ಸರಕಾರ ಸ್ಪಂದಿಸಿ ಕಚೇರಿ ಆರಂಭಿಸಲು ಒಪ್ಪಿಗೆ ನೀಡಿದ್ದು,ಇಂದು ಕಾರ್ಯಾರಂಭ ಮಾಡಿದೆ ಎಂದರು.