<p><strong>ಹೊಸಪೇಟೆ: </strong>ಶಂಕರಾಚಾರ್ಯರ ಜಯಂತಿಯನ್ನು ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಗುರುವಾರ ಸರಳವಾಗಿ ಆಚರಿಸಲಾಯಿತು.</p>.<p>ತಾಲ್ಲೂಕು ಆಡಳಿತ ಮತ್ತು ಬ್ರಾಹ್ಮಣರ ಸಂಘದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಂಕರಾಚಾರ್ಯರ ಭಾವಚಿತ್ರಕ್ಕೆ ತಹಶೀಲ್ದಾರ್ ನಾಗರಾಜ್ ಪುಷ್ಪಗೌರವ ಸಲ್ಲಿಸಿದರು.</p>.<p>ಬ್ರಾಹ್ಮಣ ಸಮಾಜದ ಮುಖಂಡ ಕಲ್ಲಂಭಟ್ ಮಾತನಾಡಿ, ‘ಶಂಕರಾಚಾರ್ಯರು ಹಿಂದೂ ಧರ್ಮದ ಉಳಿವಿಗೆ ಶ್ರಮಿಸಿದ್ದರು. ಅನೇಕ ಕಡೆಗಳಲ್ಲಿ ಸಂಚರಿಸಿ ಧರ್ಮ ಪ್ರಸಾರ ಮಾಡಿದ್ದರು’ ಎಂದು ನೆನೆದರು.</p>.<p>ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ದಿವಾಕರ್, ಮುಖಂಡರಾದ ವೇಣುಗೋಪಾಲ ವೈದ್ಯ, ರಮೇಶ ಪುರೋಹಿತ, ಪ್ರಕಾಶ್, ಅನಿಲ್ ಜೋಷಿ, ಅನಂತ ಪದ್ಮನಾಭ, ಉಪ ತಹಶೀಲ್ದಾರ್ ರಮೇಶ ನಾಯ್ಕ, ದೀಕ್ಷಿತ್, ವಕೀಲರ ಸಂಘದ ಅಧ್ಯಕ್ಷ ಜಿ.ಉಮೇಶ್, ಎಸ್.ಕೆ.ವಿನಯ್, ಮಾರೆಣ್ಣ, ನಾಗರಾಜ, ಮಧು ಇದ್ದರು.</p>.<p>ತಾಲ್ಲೂಕಿನ ಹಂಪಿ ಶಂಕರಾಚಾರ್ಯ ಮಠದಲ್ಲಿ ಮೂರ್ತಿಯನ್ನು ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹೊಸಪೇಟೆ: </strong>ಶಂಕರಾಚಾರ್ಯರ ಜಯಂತಿಯನ್ನು ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಗುರುವಾರ ಸರಳವಾಗಿ ಆಚರಿಸಲಾಯಿತು.</p>.<p>ತಾಲ್ಲೂಕು ಆಡಳಿತ ಮತ್ತು ಬ್ರಾಹ್ಮಣರ ಸಂಘದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಂಕರಾಚಾರ್ಯರ ಭಾವಚಿತ್ರಕ್ಕೆ ತಹಶೀಲ್ದಾರ್ ನಾಗರಾಜ್ ಪುಷ್ಪಗೌರವ ಸಲ್ಲಿಸಿದರು.</p>.<p>ಬ್ರಾಹ್ಮಣ ಸಮಾಜದ ಮುಖಂಡ ಕಲ್ಲಂಭಟ್ ಮಾತನಾಡಿ, ‘ಶಂಕರಾಚಾರ್ಯರು ಹಿಂದೂ ಧರ್ಮದ ಉಳಿವಿಗೆ ಶ್ರಮಿಸಿದ್ದರು. ಅನೇಕ ಕಡೆಗಳಲ್ಲಿ ಸಂಚರಿಸಿ ಧರ್ಮ ಪ್ರಸಾರ ಮಾಡಿದ್ದರು’ ಎಂದು ನೆನೆದರು.</p>.<p>ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ದಿವಾಕರ್, ಮುಖಂಡರಾದ ವೇಣುಗೋಪಾಲ ವೈದ್ಯ, ರಮೇಶ ಪುರೋಹಿತ, ಪ್ರಕಾಶ್, ಅನಿಲ್ ಜೋಷಿ, ಅನಂತ ಪದ್ಮನಾಭ, ಉಪ ತಹಶೀಲ್ದಾರ್ ರಮೇಶ ನಾಯ್ಕ, ದೀಕ್ಷಿತ್, ವಕೀಲರ ಸಂಘದ ಅಧ್ಯಕ್ಷ ಜಿ.ಉಮೇಶ್, ಎಸ್.ಕೆ.ವಿನಯ್, ಮಾರೆಣ್ಣ, ನಾಗರಾಜ, ಮಧು ಇದ್ದರು.</p>.<p>ತಾಲ್ಲೂಕಿನ ಹಂಪಿ ಶಂಕರಾಚಾರ್ಯ ಮಠದಲ್ಲಿ ಮೂರ್ತಿಯನ್ನು ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>