ಹೊಸಪೇಟೆ: ಶಂಕರಾಚಾರ್ಯರ ಜಯಂತಿಯನ್ನು ಇಲ್ಲಿನ ತಾಲ್ಲೂಕು ಕಚೇರಿಯಲ್ಲಿ ಗುರುವಾರ ಸರಳವಾಗಿ ಆಚರಿಸಲಾಯಿತು.
ತಾಲ್ಲೂಕು ಆಡಳಿತ ಮತ್ತು ಬ್ರಾಹ್ಮಣರ ಸಂಘದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶಂಕರಾಚಾರ್ಯರ ಭಾವಚಿತ್ರಕ್ಕೆ ತಹಶೀಲ್ದಾರ್ ನಾಗರಾಜ್ ಪುಷ್ಪಗೌರವ ಸಲ್ಲಿಸಿದರು.
ಬ್ರಾಹ್ಮಣ ಸಮಾಜದ ಮುಖಂಡ ಕಲ್ಲಂಭಟ್ ಮಾತನಾಡಿ, ‘ಶಂಕರಾಚಾರ್ಯರು ಹಿಂದೂ ಧರ್ಮದ ಉಳಿವಿಗೆ ಶ್ರಮಿಸಿದ್ದರು. ಅನೇಕ ಕಡೆಗಳಲ್ಲಿ ಸಂಚರಿಸಿ ಧರ್ಮ ಪ್ರಸಾರ ಮಾಡಿದ್ದರು’ ಎಂದು ನೆನೆದರು.
ತಾಲ್ಲೂಕು ಬ್ರಾಹ್ಮಣ ಸಂಘದ ಅಧ್ಯಕ್ಷ ದಿವಾಕರ್, ಮುಖಂಡರಾದ ವೇಣುಗೋಪಾಲ ವೈದ್ಯ, ರಮೇಶ ಪುರೋಹಿತ, ಪ್ರಕಾಶ್, ಅನಿಲ್ ಜೋಷಿ, ಅನಂತ ಪದ್ಮನಾಭ, ಉಪ ತಹಶೀಲ್ದಾರ್ ರಮೇಶ ನಾಯ್ಕ, ದೀಕ್ಷಿತ್, ವಕೀಲರ ಸಂಘದ ಅಧ್ಯಕ್ಷ ಜಿ.ಉಮೇಶ್, ಎಸ್.ಕೆ.ವಿನಯ್, ಮಾರೆಣ್ಣ, ನಾಗರಾಜ, ಮಧು ಇದ್ದರು.
ತಾಲ್ಲೂಕಿನ ಹಂಪಿ ಶಂಕರಾಚಾರ್ಯ ಮಠದಲ್ಲಿ ಮೂರ್ತಿಯನ್ನು ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.